ಮಂಜು ದಟ್ಟವಾಗಿ ಕವಿದಿದ್ದರಿಂದ, ರಸ್ತೆ ಕಾಣದಾಗಿ ಆಲ್ಟೊ ಕಾರ್, ನಿಂತಿದ್ದ ಟ್ರ್ಯಾಕ್ಟರ್ ಟ್ರಾಲಿಗೆ ಗುದ್ದಿದೆ. ಮೃತಪಟ್ಟವರನ್ನು ಗಾಜಿಯಾಬಾದ್ ನಿವಾಸಿಗಳಾದ ಮನೋಜ್ ಕುಮಾರ್ (೫೩), ಸೋನಿ ಸಿನ್ಹಾ (೫೦), ಬಿಹಾರದ ಪಾಟ್ನಾ ನಿವಾಸಿಯಾದ ಉಷಾ (೭೩) ಮತ್ತು ನವದೆಹಲಿಯ ಜಾಮಿಯಾ ನಗರದ ನಿವಾಸಿ ಸುಲ್ತಾನ್ ಅಹಮದ್ (೪೦) ಎಂದು ಗುರುತಿಸಲಾಗಿದೆ.