ಕೇರಳದಲ್ಲಿ ಆರ್ ಎಸ್ ಎಸ್ ಕಾರ್ಯಕರ್ತನ ಕೊಲೆ; ಸಿ ಪಿ ಎಂ ಕಾರ್ಯಕರ್ತನ ಬಂಧನ

ಪಿ ವಿ ಸುಜಿತ್(೨೭) ಎಂದು ಗುರುತಿಸಲಾಗಿರುವ ಆರ್ ಎಸ್ ಎಸ್ ಕಾರ್ಯಕರ್ತನನ್ನು ಪಪ್ಪಿನಿಸ್ಸೇರಿಯ ಅವರ ನಿವಾಸದ ಬಳಿ ಸೋಮವಾರ ರಾತ್ರಿ ಕೊಲೆ ಮಾಡಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಕಣ್ಣೂರು: ಪಿ ವಿ ಸುಜಿತ್(೨೭) ಎಂದು ಗುರುತಿಸಲಾಗಿರುವ ಆರ್ ಎಸ್ ಎಸ್ ಕಾರ್ಯಕರ್ತನನ್ನು ಪಪ್ಪಿನಿಸ್ಸೇರಿಯ ಅವರ ನಿವಾಸದ ಬಳಿ ಸೋಮವಾರ ರಾತ್ರಿ ಕೊಲೆ ಮಾಡಲಾಗಿದೆ. ಕೊಲೆಗಡುಕರಿಂದ ಮಗನನ್ನು ರಕ್ಷಿಸಲು ಮುಂದಾದ ಪೋಷಕರಿಗೂ ಈ ದಾಳಿಯಲ್ಲಿ ತೀವ್ರ ಗಾಯಗಳಾಗಿವೆ.

ಸೋಮವಾರ ರಾತ್ರಿ ಸುಮಾರು ೧೧:೩೦ ಕ್ಕೆ ಈ ಘಟನೆ ನಡೆದಿದ್ದು, ಆಯುಧಗಳನ್ನು ಹಿಡಿದ ಒಂದು ಗುಂಪು, ವಾಲಪಟ್ಟಣಮ್ ಪೊಲೀಸ್ ಠಾಣೆಯ ಸುಪರ್ದಿಯಲ್ಲಿರುವ ಪಪ್ಪಿನಿಸ್ಸೇರಿಯ ಅರೋಲಿ ಬಳಿ ಇರುವ ಸಂತ್ರಸ್ತನ ಮನೆಗೆ ನುಗ್ಗಿ ದಾಳಿ ನಡೆಸಿದೆ. ಸಂತ್ರಸ್ತನಿಗೆ ಇರಿದ ಗಾಯಗಳಾಗಿದ್ದು ಕೂಡಲೇ ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದ್ದರೂ ಅವರು ಅಸು ನೀಗಿದ್ದಾರೆ. ಈ ಕೊಲೆಯ ಹಿಂದೆ ಸಿ ಪಿ ಎಂ ಪಕ್ಷದ ಕೈವಾಡವಿದೆ ಎಂದು ಭಾರತೀಯ ಜನತಾ ಪಕ್ಷದ ಜಿಲ್ಲಾ ಮುಖಂಡರು ದೂರಿದ್ದಾರೆ.

ಈ ದಾಳಿಯ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದು ಶಂಕಿತ ಸಿ ಪಿ ಎಂ ಕಾರ್ಯಕರ್ತನೋಬ್ಬನನ್ನು ಬಂಧಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com