ದೆಹಲಿಯ ಜನರಿಗೆ ಪೂರೈಸಲು ಜನಮಂಡಳಿ ಬಳಿ ನೀರಿಲ್ಲ. ಭಾನುವಾರಕ್ಕೆ ನೀರು ಪೂರೈಸಬಹುದು. ಆದರೆ, ನಾಳೆಯಿಂದ ದೆಹಲಿಯಲ್ಲಿ ನೀರು ತೊಂದರೆ ಎದುರಿಸಬೇಕಾಗುತ್ತದೆ ಎಂದು ದೆಹಲಿ ಸಚಿವ ಕಪಿಲ್ ಮಿಶ್ರಾ ಹೇಳಿದ್ದಾರೆ. ಅಲ್ಲದೇ, ನೀರು ಅಭಾವ ಉಂಟಾದ ಹಿನ್ನಲೆಯಲ್ಲಿ ದೆಹಲಿ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ.