ನಾನಿದ್ದರು, ಇಲ್ಲದಿದ್ದರೂ ಭಾರತ ಇನ್​ಕ್ರೆಡಿಬಲ್: ಆಮೀರ್ ಖಾನ್

ನಾನಿದ್ದರೂ ಇಲ್ಲದಿದ್ದರೂ ಭಾರತ ಯಾವತ್ತೂ ಇನ್​ಕ್ರೆಡಿಬಲ್ ಎಂದು ಬಾಲಿವುಡ್ ನಟ ಆಮೀರ್ ಖಾನ್ ಅವರು ಗುರುವಾರ ಹೇಳಿದ್ದಾರೆ.
ಆಮಿರ್ ಖಾನ್
ಆಮಿರ್ ಖಾನ್
ಮುಂಬೈ: ನಾನಿದ್ದರೂ ಇಲ್ಲದಿದ್ದರೂ ಭಾರತ ಯಾವತ್ತೂ ಇನ್​ಕ್ರೆಡಿಬಲ್ ಎಂದು ಬಾಲಿವುಡ್ ನಟ ಆಮೀರ್ ಖಾನ್ ಅವರು ಗುರುವಾರ ಹೇಳಿದ್ದಾರೆ.
ಇನ್​ಕ್ರೆಡಿಬಲ್ ಇಂಡಿಯಾ ಅಭಿಯಾನದೊಂದಿಗಿನ ಆಮೀರ್ ಖಾನ್ ಅವರ ಒಪ್ಪಂದದ ಅವಧಿ ಮುಗಿದಿದ್ದು, ಅದನ್ನು ಮತ್ತೆ ನವೀಕರಿಸುವುದಿಲ್ಲ ಎಂಬ ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ಹೇಳಿಕೆ ಬಗ್ಗೆ ಇಂದು ಪ್ರತಿಕ್ರಿಯಿಸಿರುವ ಬಾಲಿವುಡ್ ನಟ, ನಾನು ಸರ್ಕಾರದ ತೀರ್ಮಾನವನ್ನು ಗೌರವಿಸುತ್ತೇನೆ ಎಂದಿದ್ದಾರೆ.
ಕಳೆದ 10 ವರ್ಷಗಳಿಂದ ‘ಇನ್​ಕ್ರೆಡಿಬಲ್ ಇಂಡಿಯಾ’ ಅಭಿಯಾನದ ರಾಯಭಾರಿಯಾಗಿ ನಾನು ಪ್ರಚಾರ ಮಾಡಿದ್ದೇನೆ. ಅದಕ್ಕಾಗಿ ನಾನು ಸರ್ಕಾರದಿಂದ ಹಣ ಪಡೆದಿಲ್ಲ. ಉಚಿತವಾಗಿ ಅಭಿಯಾನಕ್ಕೆ ಬೆಂಬಲ ನೀಡಿದ್ದೇನೆ. ನನ್ನನ್ನು ಅಭಿಯಾನದಿಂದ ಕೈ ಬಿಟ್ಟಿರುವುದಕ್ಕೆ ನನಗೆ ಬೇಸರವಿಲ್ಲ, ಕೇಂದ್ರ ಸರ್ಕಾರ ದೇಶದ ಒಳಿತಿಗಾಗಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬ ನಂಬಿಕೆ ನನಗಿದೆ ಎಂದು ಆಮೀರ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ.
10 ವರ್ಷಗಳ ಕಾಲ ನಾನು ಇನ್​ಕ್ರೆಡಿಬಲ್ ಇಂಡಿಯಾ ಅಭಿಯಾನದ ರಾಯಭಾರಿಯಾಗಿ ದುಡಿದಿದ್ದೇನೆ. ಇದು ನನಗೆ ಸಿಕ್ಕ ಅಪೂರ್ವ ಅವಕಾಶ, ಅದನ್ನು ನಾನು ಸದುಪಯೋಗ ಪಡಿಸಿಕೊಂಡಿದ್ದೇನೆ. ನಾನು ದೇಶಕ್ಕಾಗಿ ಸೇವೆ ಸಲ್ಲಿಸಲು ಸದಾ ಸಿದ್ಧನಿದ್ದೇನೆ. ನಾನು ಪ್ರಚಾರ ರಾಯಭಾರಿ ಆಗಿಲ್ಲದಿದ್ದರೂ ಸಹ ಭಾರತ ‘ಇನ್​ಕ್ರೆಡಿಬಲ್’ ಆಗಿರಲಿದೆ ಎಂದು ಆಮೀರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com