ಮೇ 25ರಂದು ಪಿಣರಾಯಿ ವಿಜಯನ್ ಪ್ರಮಾಣ

ಮೇ ೨೫ ರಂದು ಕೇರಳದ ರಾಜಧಾನಿಯಲ್ಲಿ ಪಿಣರಾಯಿ ವಿಜಯನ್ ಅವರು ರಾಜ್ಯದ ೨೨ನೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಕೇರಳದ ೨೨ನೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಪಿಣರಾಯಿ ವಿಜಯನ್
ಕೇರಳದ ೨೨ನೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಪಿಣರಾಯಿ ವಿಜಯನ್
Updated on

ತಿರುವನಂತಪುರಮ್: ಮೇ ೨೫ ರಂದು ಕೇರಳದ ರಾಜಧಾನಿಯಲ್ಲಿ ಪಿಣರಾಯಿ ವಿಜಯನ್ ಅವರು ರಾಜ್ಯದ ೨೨ನೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಸಿಪಿಐ-ಎಂ ಮುಂದಾಳತ್ವದ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಎಲ್ ಡಿ ಎಫ್) ಕೇರಳ ವಿಧಾನಸಭೆಯ ೧೪೦ ಸಂಖ್ಯೆಯ ಬಲಾಬಲದಲ್ಲಿ ೯೧ ಸ್ಥಾನಗಳನ್ನು ಗುರುವಾರ ಗೆದ್ದಿತ್ತು.

ತಮ್ಮ ಸಹದ್ಯೋಗಿ ವಿ ಎಸ್ ಅಚ್ಯುತಾನಂದ್ ಮತ್ತು ಸಿಪಿಐ-ಎಂ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣ ಅವರನ್ನು ವಿಜಯನ್ ಭೇಟಿ ಮಾಡಿದ ಮೇಲೆ ಪ್ರಮಾಣವಚನ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

"ಅವರು (ಅಚ್ಯುತಾನಂದ್) ಅವರು ನಮ್ಮ ಪಕ್ಷದಿಂದ ಈ ಹಿಂದೆ ಮುಖ್ಯಮಂತ್ರಿಯಾಗಿದ್ದವರು. ಆದುದರಿಂದ ನಮ್ಮನ್ನು ಭೇಟಿ ಮಾಡಿದರು. ಸದ್ಯಕ್ಕೆ ನಿಗದಿಯಾಗಿರುವಂತೆ ಸೆಂಟ್ರಲ್ ಸ್ಟೇಡಿಯಂ ನಲ್ಲಿ ಬುಧವಾರ (ಮೇ ೨೫) ಹೊಸ ಸರ್ಕಾರದ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ" ಎಂದು ವಿಜಯನ್ ಹೇಳಿದ್ದಾರೆ.

"ಸಂಪುಟ ರಚನೆಯ ಬಗ್ಗೆ ಚರ್ಚೆಗಳು ಜಾರಿಯಲ್ಲಿವೆ ಮತ್ತು ಮುಂದಿನ ದಿನಗಳಲ್ಲಿ ಈ ಪಟ್ಟಿ ಸಿದ್ಧವಾಗಲಿದೆ" ಎಂದು ಕೂಡ ಅವರು ಹೇಳಿದ್ದಾರೆ.

ಶುಕ್ರವಾರ ನಡೆದ ಪಕ್ಷದ ಸಭೆಯಲ್ಲಿ ವಿಜಯನ್ ಅವರನ್ನು ಮುಖಂಡರನ್ನಾಗಿ ಆಯ್ಕೆ ಮಾಡಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com