ಖಳನಟರ ಮೃತದೇಹ ಶೋಧಕ್ಕೆ ನೌಕಾಪಡೆ ಸಹಾಯ

ಸತತ 27 ಗಂಟೆಗಳ ಕಾರ್ಯಾಚರಣೆಯಲ್ಲಿ ಖಳನಟ ಅನಿಲ್ ಮತ್ತು ಉದಯ್ ಅವರ ಮೃತದೇಹಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ನೌಕಾಪಡೆ ಸಹಾಯ ಕೋರುವಂತೆ...
ಡ್ಯಾಂನಲ್ಲಿ ಮೃತಪಟ್ಟ ನಟರ ಮೃತದೇಹಕ್ಕಾಗಿ ಶೋಧ ಕಾರ್ಯ
ಡ್ಯಾಂನಲ್ಲಿ ಮೃತಪಟ್ಟ ನಟರ ಮೃತದೇಹಕ್ಕಾಗಿ ಶೋಧ ಕಾರ್ಯ
ಬೆಂಗಳೂರು: ಸತತ 27 ಗಂಟೆಗಳ ಕಾರ್ಯಾಚರಣೆಯಲ್ಲಿ ಖಳನಟ ಅನಿಲ್ ಮತ್ತು ಉದಯ್ ಅವರ ಮೃತದೇಹಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ನೌಕಾಪಡೆ ಸಹಾಯ ಕೋರುವಂತೆ ರಾಜ್ಯ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಅಗ್ನಿಶಾಮಕ ಸೇವೆ ಮಹಾನಿರ್ದೇಶಕ ಎಂಎನ್ ರೆಡ್ಡಿ ಅವರಿಗೆ ಸೂಚಿಸಿದ್ದಾರೆ. 
ದುನಿಯಾ ವಿಜಯ್ ಅಭಿನಯದ ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ತಿಪ್ಪಗೊಂಡನಹಳ್ಳಿ ಜಲಾಶಯದ ನೀರಿನಲ್ಲಿ ಮುಳುಗಿ ಮೃತಪಟ್ಟಿದ ಖಳನಟ ಅನಿಲ್ ಮತ್ತು ಉದಯ್ ಅವರ ಮೃತದೇಹಗಳು ಇನ್ನು ಪತ್ತೆಯಾಗದರಿಂದ ಅವಶ್ಯಕತೆ ಬಿದ್ದರೆ ಕಾರವಾರ ನೌಕಾಪಡೆ ನುರಿತ ಈಜುಗಾರರ ಸಹಾಯ ಕೋರುವುದಾಗಿ ಹೇಳಿದ್ದಾರೆ. 
ಶೋಧ ಕಾರ್ಯಾಚರಣೆಗೆ ನುರಿತ ಈಜುಗಾರರನ್ನು ಕಳುಹಿಸಿಕೊಡುವಂತೆ ಪ್ರಧಾನ ಇನ್ಸ್ ಪೆಕ್ಟರ್(ಪಶ್ಚಿಮ) ಅರುಣ್ ಚಕ್ರವರ್ತಿ ಅವರಿಗೆ ಸೂಚಿಸಲಾಗಿದೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com