ತಮಿಳುನಾಡಿಗೆ ನೀರು ಬಿಡುವ ಸಂಬಂಧ ರಾಜ್ಯ ಸರ್ಕಾರ ನಿನ್ನೆ ಕರೆದಿದ್ದ ವಿಶೇಷ ಅಧಿವೇಶನದಲ್ಲಿ ಕಾವೇರಿ ನೀರನ್ನು ರೈತರ ಬೆಳೆಗೂ ಹರಿಸಲು ನಿರ್ಣಯ ಕೈಗೊಂಡಿದ್ದು, ಈಗಾಗಲೇ ಕಳೆದ ರಾತ್ರಿಯಿಂದಲೇ 9,000 ಕ್ಯೂಸೆಕ್ಸ್ ನೀರು ಹರಿದಿದೆ. ಇಂದು ಮತ್ತು ನಾಳೆ ಹೆಚ್ಚು ಹೆಚ್ಚು ನೀರು ಹರಿಸುವ ಮೂಲಕ ನಿಮ್ಮ ಆದೇಶದಂತೆ ಬಾಕಿ ಕೊರತೆಯನ್ನು ನೀಗಿಸುತ್ತೇವೆ. ಅಕ್ಟೋಬರ್ 06ರೊಳಗೆ ಸುಪ್ರೀಂ ಆದೇಶ ಪೂರ್ತಿಯಾಗಿ ಪಾಲಿಸಲಾಗುತ್ತದೆ ಎಂದು ನಾರಿಮನ್ ತಿಳಿಸಿದರು.