ಕೊಚ್ಚಿ: ಕೇರಳದಲ್ಲಿ ಪೋಲೀಸರ ಬಂಧನದಲ್ಲಿ ನಡೆದಿರುವ ಮತ್ತೊಂದು ದೌರ್ಜನ್ಯದ ಘಟನೆಯಲ್ಲಿ, ಸೂರಜ್ ಎಂಬ ದಲಿತ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ತಮ್ಮ ತಂದೆ ಮತ್ತು ತಂದೆಯ ಸೋದರನ ನಡುವಿನ ಕಾದಾಟವನ್ನು ಪೊಲೀಸರಿಗೆ ದೂರು ನೀಡಲು ಹೋದ ಸೂರಜ್, ಪೊಲೀಸರಿಂದಲೇ ಏಟು ತಿಂದು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸೇರಿದ್ದಾರೆ.