ಪಳನಿಸ್ವಾಮಿ ಅವರು ನಾಳೆ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಬೇಕಾಗಿರುವ ಹಿನ್ನೆಲೆಯಲ್ಲಿ ಪನ್ನೀರ್ ಸೆಲ್ವಂ ಬಣದ ಶಾಸಕರಾದ ಕೆ ಪಾಂಡಿಯಾರಾಜನ್, ಎಸ್ ಸೆಮ್ಮಲಾಯಿ ಹಾಗೂ ಷನ್ಮುಗನಾಥನ್ ಮತ್ತು ಹಿರಿಯ ನಾಯಕರಾದ ಸಿ ಪೊನ್ನಯನ್ ಅವರು ಇಂದು ಸ್ಪೀಕರ್ ಭೇಟಿ ಮಾಡಿ ಮಾತುಕತೆ ನಡೆಸಿದೆ. ಆದರೆ ಸ್ಪೀಕರ್ ಭೇಟಿಯ ಬಳಿಕ ಮಾಧ್ಯಮಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.