ಕಾನೂನಿಗಿಂತ ಯಾರೂ ದೊಡ್ಡವರಲ್ಲ, ಇದು ಕ್ರಿಕೆಟ್ ಗೆ ಸಂದ ಜಯ: ನ್ಯಾ. ಲೋಧಾ

ಬಿಸಿಸಿಐ ಮತ್ತು ಲೋಧಾ ಸಮಿತಿ ನಡುವಿನ ಹೋರಾಟದಲ್ಲಿ ಕ್ರಿಕೆಟ್ ಜಯ ಸಂದಿದೆ ಎಂದು ನ್ಯಾಯಮೂರ್ತಿ ಲೋಧಾ ಅಭಿಪ್ರಾಯಪಟ್ಟಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಬಿಸಿಸಿಐ ಮತ್ತು ಲೋಧಾ ಸಮಿತಿ ನಡುವಿನ ಹೋರಾಟದಲ್ಲಿ ಕ್ರಿಕೆಟ್ ಜಯ ಸಂದಿದೆ ಎಂದು ನ್ಯಾಯಮೂರ್ತಿ ಲೋಧಾ ಅಭಿಪ್ರಾಯಪಟ್ಟಿದ್ದಾರೆ.

ಅತ್ತ ಸುಪ್ರೀಂ ಕೋರ್ಟ್ ನ ಸಾಂವಿಧಾನಿಕ ಪೀಠ ಲೋಧಾ ಸಮಿತಿ ಶಿಫಾರಸ್ಸನ್ನು ಜಾರಿಗೊಳಿಸದ ಹಿನ್ನಲೆಯಲ್ಲಿ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಹಾಗೂ ಬಿಸಿಸಿಐ ಕಾರ್ಯದರ್ಶಿ ಅಜಯ್ ಶಿರ್ಕೆ ಅವರನ್ನು  ವಜಾಗೊಳಿಸುತ್ತಿದ್ದಂತೆಯೇ ಇತ್ತ ಸಮಿತಿ ಅಧ್ಯಕ್ಷ  ಲೋಧಾ ಅವರು ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ. ದೇಶದ ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಆಡಳಿತಗಾರರು ಇಂದು ಇರುತ್ತಾರೆ, ನಾಳೆ ಹೋಗುತ್ತಾರೆ, ಆದರೆ ಕ್ರೀಡೆ  ಶಾಶ್ವತ, ಇದು ಕ್ರೀಡೆಗೆ ಸಂದ ಜಯ ಎಂದು ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ಅಲ್ಲದೆ ಸುಪ್ರೀ ಕೋರ್ಚ್ ಇದೇ ರೀತಿಯ ನಿಲುವನ್ನು ಇತರೆ ಕ್ರೀಡೆಗಳ ಮೇಲೂ ತೋರಬೇಕು ಎಂದು ಲೋಧಾ ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com