ನವದೆಹಲಿ: 68ನೇ ಗಣರಾಜ್ಯೋತ್ಸವ ಪ್ರಯುಕ್ತ ಪ್ರಮಾಣಿಕ ಪೊಲೀಸ್ ಅಧಿಕಾರಿಗಳಿಗೆ ನೀಡಲಾಗುವ ರಾಷ್ಟ್ರಪತಿ ಪದಕಕ್ಕೆ ರಾಜ್ಯದ 22 ಪೊಲೀಸ್ ಅಧಿಕಾರಿಗಳು ಭಾಜನರಾಗಿದ್ದಾರೆ.
ಅಪ್ರತಿಮ ಸೇವೆ ಸಲ್ಲಿಸಿದಕ್ಕಾಗಿ ನೀಡಲಾಗಿರುವ ಈ ಪ್ರಶಸ್ತಿಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಜನವರಿ 26, ಗಣರಾಜ್ಯೋತ್ಸವದಂದು ಪ್ರದಾನ ಮಾಡಲಿದ್ದಾರೆ.
ಎಸಿಬಿ ಐಜಿಪಿ ಡಾ.ಅಬ್ದುಲ್ ಸಲೀಂ, ಹೆಚ್ಚುವರಿ ಪೊಲೀಸ್ ಆಯುಕ್ತ ಕೆ.ಎಸ್.ಆರ್ ಚರಣ್ ರೆಡ್ಡಿ, ತುಮಕೂರು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಬಿ.ಮಂಜುನಾಥ್ ಸೇರಿದಂತೆ 22 ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕಕ್ಕೆ ಆಯ್ಕೆಯಾಗಿದ್ದಾರೆ.
19 ಪೊಲೀಸ್ ಅಧಿಕಾರಿಗಳಿಗೆ ಉತ್ತಮ ಸೇವಾ ಪದಕ
ಪಿ.ಪಾಪಣ್ಣ - ಡಿಸಿಪಿ, ಬೆಂಗಳೂರು ದಕ್ಷಿಣ
ಜಯಕುಮಾರ್ - ಎಸಿಪಿ, ಖಡೇಬಜಾರ್, ಬೆಳಗಾವಿ
ಉದಯ್ ನಾಯ್ಕ್ - ಎಸಿಪಿ, ಮಂಗಳೂರು ಕೇಂದ್ರ ವಲಯ
ಸಿ.ಆರ್.ರವಿಶಂಕರ್ - ಡಿಎಸ್ ಪಿ, CID ಬೆಂಗಳೂರು
ಅ್ಯಂಥೋನಿ ಜಾನ್, ಡಿವೈಎಸ್ ಪಿ ಎಸಿಬಿ
ಎಂ.ಕೆ.ಗಣೇಶ್ - ಕೆಎಸ್ಆರ್ಪಿ, ಬೆಂಗಳೂರು
ಎಸ್.ಬಿ.ಮಹೇಶ್ವರಪ್ಪ - ಡಿಎಸ್ ಪಿ, ಕೇಂದ್ರ ವಲಯ ಬೆಂಗಳೂರು
ವ್ಯಾಲೆಂಟೈನ್ ಡಿಸೋಜಾ, ಎಸಿಪಿ, ಮಂಗಳೂರು
ಪರಶುರಾಮ್ ಎಸ್ ವಡ್ಡರ್ - ಎಸ್ ಐ, ಗುಪ್ತಚರ, ಬೆಂಗಳೂರು
ಕೆ.ಆರ್.ಸುನಿತಾ - ಎಸ್ ಐ, ಎನ್.ಆರ್.ಪುರ, ಚಿಕ್ಕಮಗಳೂರು