ಚಿತ್ರದುರ್ಗ: ಬಿಜೆಪಿ ಹಿರಿಯ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಜಿಎಂ ಸಿದ್ದೇಶ್ವರ ಅವರ ನಿವಾಸದ ಮೇಲೆ ಕೇಂದ್ರ ಆದಾಚ ತೆರಿಗೆ ಅಧಿಕಾರಿಗಳು ಗುರುವಾರ ದಾಳಿ ಮಾಡಿದ್ದು, ಮಹತ್ವದ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.
ಜಿಎಂ ಸಿದ್ದೇಶ್ವರ ಅವರ ಕುಟುಂಬಕ್ಕೆ ಸೇರಿದೆ ದಾವಣಗೆರೆ, ಚಿತ್ರದುರ್ಗದ ನಿವಾಸ ಮತ್ತು ಕಚೇರಿಗಳ ಮೇಲೆ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದು, ಮಹತ್ವದ ದಾಖಲೆಗಳನ್ನು ವಶಪಜಿಸಿಕೊಂಡು ಪರಿಶೀಲಿಸುತ್ತಿದ್ದಾರೆ. ಸಿದ್ದೇಶ್ವರ ಅವರ ಭೀಮಸಮುದ್ರದ ನಿವಾಸ ಸೇರಿದಂತೆ ಅವರ ಒಡೆತನದ ಗುಟ್ಕಾ ಫ್ಯಾಕ್ಟರಿ, ಸಹಕಾರಿ ಬ್ಯಾಂಕ್ ಹಾಗೂ ಕಾಲೇಜುಗಳ ಮೇಲೆ ಗುರುವಾರ ಏಕಕಾಲದಲ್ಲಿ ಐಟಿ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.ಇದಲ್ಲದೆ ದಾವಣಗೆರೆಯ ಜಿ.ಎಂ.ಸೌಹಾರ್ದ ಬ್ಯಾಂಕ್, ಜಿಎಂಐಟಿ ಕಾಲೇಜ್, ಅಡಿಕೆ ಮಂಡಿ ಸೇರಿದಂತೆ ಸಿದ್ದೇಶ್ವರ ಅವರ ಸಹೋದರ ಪ್ರಸನ್ನ ಕುಮಾರ್ ನಿವಾಸದ ಮೇಲೂ ದಾಳಿ ನಡೆಸಲಾಗಿದೆ ಎನ್ನಲಾಗಿದೆ.
ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.
Advertisement