ವಕ್ಫ್ (ತಿದ್ದುಪಡಿ) ಮಸೂದೆ, 2024 ಮಂಡನೆ; ವಿರೋಧ ಪಕ್ಷಗಳಿಗೆ ಕಿರಣ್ ರಿಜಿಜು ಹೇಳಿದ್ದಿಷ್ಟು...

ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ 2024 ಮಂಡನೆ ನಂತರ ವಿರೋಧ ಪಕ್ಷದ ನಾಯಕರು ಎತ್ತಿರುವ ಆಕ್ಷೇಪಗಳಿಗೆ ಗುರುವಾರ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಉತ್ತರ ನೀಡಿದರು.

ಈ ಮಸೂದೆಯು ಭಾರತೀಯ ಸಂವಿಧಾನದ ಒಂದೇ ಒಂದು ಷರತ್ತನ್ನು ಉಲ್ಲಂಘಿಸುವುದಿಲ್ಲ ಎಂದು ಪ್ರತಿಪಾದಿಸಿದ ಅವರು, ''ವಕ್ಫ್ ಮಂಡಳಿಯು ಸಂವಿಧಾನದ 25 ಮತ್ತು 26 ನೇ ಪರಿಚ್ಛೇದದ ವ್ಯಾಪ್ತಿಗೆ ಬರುವುದಿಲ್ಲ ಎಂದು ಅವರು ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿದರು.

ಮಸೂದೆ ಯಾರ ಹಕ್ಕುಗಳನ್ನು ಕಸಿದುಕೊಳ್ಳುವುದಿಲ್ಲ, ಬದಲಾಗಿ ಇದುವರೆಗೆ ವಂಚಿತರಾದವರಿಗೆ ಹಕ್ಕುಗಳನ್ನು ನೀಡುತ್ತದೆ ಎಂದು ರಿಜಿಜು ಸ್ಪಷ್ಟಪಡಿಸಿದರು. ಈ ಮಸೂದೆಯನ್ನು ಮೊದಲ ಬಾರಿಗೆ ಸದನದಲ್ಲಿ ಮಂಡಿಸಲಾಗಿಲ್ಲ. ಸ್ವಾತಂತ್ರ್ಯದ ನಂತರ, ಈ ಕಾಯಿದೆಯನ್ನು ಮೊದಲು 1954 ರಲ್ಲಿ ತರಲಾಯಿತು. ಅನೇಕ ತಿದ್ದುಪಡಿಗಳು ನಡೆಯಿತು. ನಾವು 2013 ರಲ್ಲಿ ಹಾಕಲಾದ ನಿಬಂಧನೆಗಳ ಕಾರಣದಿಂದಾಗಿ ತಿದ್ದುಪಡಿಯನ್ನು ತರುತ್ತಿದ್ದೇವೆ" ಎಂದು ಸ್ಪಷ್ಟಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com