ಬ್ರಿಟಿಷರ ವಸ್ತುಗಳನ್ನು ಬಹಿಷ್ಕರಿಸುವಂತೆ ಗಾಂಧಿಜೀ ಕರೆಕೊಡುತ್ತಾರೆ. ಜನರು ಈ ಕರೆಗೆ ಓಗೊಡುತ್ತಾರೆ. ಚಳವಳಿ ಯಶಸ್ವಿಯಾಗುತ್ತದೆ. ಬ್ರಿಟಿಷರು ಬೇರೆ ದಾರಿ ಕಾಣದೆ ವಿಚಲಿತರಾಗಿ ಭಾರತ ಬಿಟ್ಟು ಹೋಗುತ್ತಾರೆ. ಒಸಾಮ ಈ ಸಂಗತಿಯನ್ನು ನೆನಪಿಸುತ್ತಾ, ಹಿಂದೂ ಗಾಂಧಿ ಇಂಥ ಕೆಲಸ ಮಾಡುತ್ತಾರೆ. ಈಗ ನೀವೂ ಅಮೆರಿಕದ ವಸ್ತುಗಳನ್ನು ಬಹಿಷ್ಕರಿಸಿ ಎಂದು ಆಫ್ಘನ್ನರಿಗೆ ಕರೆಕೊಡುವ ಕ್ಯಾಸೆಟ್ ಗಳಲ್ಲಿ ಈ ವಿಷಯ ಪ್ರಸ್ತಾಪವಾಗಿದೆ.