26/11 ಮುಂಬೈ ದಾಳಿ ಪ್ರಕರಣದ ರೂವಾರಿ ಅಜ್ಮಲ್ ಕಸಬ್ ಬದುಕಿದ್ದಾನಂತೆ!

26/11 ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಗಲ್ಲು ಶಿಕ್ಷೆ ಪಡೆದ ಅಜ್ಮಲ್ ಕಸಬ್ ಬದುಕಿದ್ದಾನಂತೆ! ಹೀಗೆಂದು ಕಸಬ್​ಗೆ ಪಾಠ ಹೇಳಿದ ಮೇಷ್ಟ್ರು ಪಾಕಿಸ್ತಾನದ ...
ಅಜ್ಮಲ್ ಕಸಬ್
ಅಜ್ಮಲ್ ಕಸಬ್
Updated on

ಲಾಹೋರ್: 26/11 ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಗಲ್ಲು ಶಿಕ್ಷೆ ಪಡೆದ ಅಜ್ಮಲ್ ಕಸಬ್ ಬದುಕಿದ್ದಾನಂತೆ! ಹೀಗೆಂದು ಕಸಬ್​ಗೆ ಪಾಠ ಹೇಳಿದ ಮೇಷ್ಟ್ರು ಪಾಕಿಸ್ತಾನದ ಕೋರ್ಟ್​ನಲ್ಲಿ ಹೇಳಿಕೆ ನೀಡಿದ್ದಾರೆ.

ಅಜ್ಮಲ್ ಕಸಬ್ ಪ್ರಾಥಮಿಕ ಶಿಕ್ಷಣ ಮಾಡಿದ್ದ ಎನ್ನಲಾದ ಫರೀದ್​ಕೋಟ್​ನ ಶಾಲೆಯಲ್ಲಿ ಶಿಕ್ಷಕರಾದ ಮುದಾಸ್ಸಿರ್ ಲಖ್ವಿ, ತಾನು ಕಸಬ್​ಗೆ ಪಾಠ ಹೇಳಿರುವುದಾಗಿ, ಆತ ಈಗಲೂ ಜೀವಂತವಿರುವುದಾಗಿ ತಿಳಿಸಿದ್ದಾರೆ. ಹೆಚ್ಚಿನ ತನಿಖೆಗೆ ಕಸಬ್​ನನ್ನು ಕೋರ್ಟ್ ವಶಕ್ಕೆ ಒಪ್ಪಿಸುವುದಾಗಿಯೂ ಹೇಳಿಕೊಂಡಿದ್ದಾರಂತೆ.

ಹೆಡ್ ಮಾಸ್ಟರ್ ಈ ಹೇಳಿಕೆ ತನಿಖಾ ಅಧಿಕಾರಿಗಳಿಗೆ ಭಾರೀ ಕಿರಿಕಿರಿ ಉಂಟು ಮಾಡಿದೆ.ಇನ್ನು ಕಸಬ್ ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದ ಎಂಬುದರ ಬಗ್ಗೆ ಸರಿಯಾದ ದಾಖಲೆಗಳನ್ನು ಒದಗಿಸಿದರೇ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಇಸ್ಲಮಾಬಾದ್​ನ ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಭಯೋತ್ಪಾದನಾ ನಿಗ್ರಹ ಕೋರ್ಟ್​ನಲ್ಲಿ ಮುಂಬೈ ದಾಳಿ ತನಿಖೆ ಸಂದರ್ಭ ಅಚ್ಚರಿಯ ಬೆಳವಣಿಗೆ ನಡೆದಿದೆ. ಈತ ಮುಂಬೈ ದಾಳಿ ಸಂಬಂಧ ನಡೆಯುತ್ತಿರುವ ವಿಚಾರಣೆಯ ಪ್ರಮುಖ ಸಾಕ್ಷಿಯಾಗಿದ್ದಾರೆ.

ಇತ್ತ ಅದೇ ದಿನ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮ ಸ್ವರಾಜ್ ಇಸ್ಲಾಮಾಬಾದ್​ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪಾಕ್​ನ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸರ್ತಾಜ್ ಅಜೀಜ್ ಮುಂಬೈ ದಾಳಿ ಪ್ರಕರಣದ ವಿಚಾರಣೆ ಬೇಗ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com