ಆಸ್ಟ್ರೇಲಿಯಾದಲ್ಲಿ ನಿರಾಶ್ರಿತರ ಪರ ಉರಿದ ಮೇಣದ ಬತ್ತಿಗಳು

ಈಗ ಎಲ್ಲೆಡೆ ನಿರಾಶ್ರಿತರ ಪರವಾಗಿ ದನಿ ಕೇಳಿಬರುತ್ತಿದೆ. ಅಯ್ಲಾನ್ ಕುರ್ದಿ ಸಾವಿನ ಹಿನ್ನೆಲೆಯಲ್ಲಿ ಮತ್ತು ವಲಸಿಗರು ಯುರೋಪಿಯನ್ ದೇಶಗಳತ್ತ ಆಶ್ರಯ ಅರಸಿ ಬರುತ್ತಿರುವವರು..
ಅಡಿಲೇಡ್ ನಲ್ಲಿ ನಡೆದ ಸಾಮೂಹಿಕ ಮೇಣದಬತ್ತಿಯ ಶ್ರದ್ಧಾಂಜಲಿ (ಚಿತ್ರಕೃಪೆ: ಗಾರ್ಡಿಯನ್)
ಅಡಿಲೇಡ್ ನಲ್ಲಿ ನಡೆದ ಸಾಮೂಹಿಕ ಮೇಣದಬತ್ತಿಯ ಶ್ರದ್ಧಾಂಜಲಿ (ಚಿತ್ರಕೃಪೆ: ಗಾರ್ಡಿಯನ್)
Updated on

ಸಿಡ್ನಿ: ಈಗ ಎಲ್ಲೆಡೆ ನಿರಾಶ್ರಿತರ ಪರವಾಗಿ ದನಿ ಕೇಳಿಬರುತ್ತಿದೆ. ಅಯ್ಲಾನ್ ಕುರ್ದಿ ಸಾವಿನ ಹಿನ್ನೆಲೆಯಲ್ಲಿ ಮತ್ತು ವಲಸಿಗರು ಯುರೋಪಿಯನ್ ದೇಶಗಳತ್ತ ಆಶ್ರಯ ಅರಸಿ ಬರುತ್ತಿರುವವರು  ಎದುರಿಸುತ್ತಿರುವ ಸಂಕಟಗಳನ್ನು ನಿವಾರಿಸುವುದಕ್ಕೆ ಆಗ್ರಹಿಸಿ ಸಿಡ್ನಿಯಲ್ಲಿ ಸೋಮವಾರ ರಾತ್ರಿ 10000 ಮಂದಿ ಉರಿಯುವ ಮೇಣದ ಬತ್ತಿಯೊಂದಿಗೆ ಪ್ರದರ್ಶನ ನಡೆಸಿದರು.

`ನನ್ನ ಮನೆಯಲ್ಲಿ ಒಂದು ರೂಮ್ ಇದೆ. ನೀವು ಬರಬಹುದು' ಎಂಬ ಪುಟ್ಟ ಬಾಲಕ ಹಿಡಿದ ಭಿತ್ತಿ ಪತ್ರ ಇಡೀ ಪ್ರದರ್ಶನದ ಆಕರ್ಷಣೆಯಾಗಿತ್ತು. ನೀವು ಆಸ್ಟ್ರೇಲಿಯಾಕ್ಕೆ ಬನ್ನಿ ಎಂಬ ಆಹ್ವಾನದ  ಭಿತ್ತಿ ಪತ್ರಗಳು ಘೋಷಣೆಗಳು ಎಲ್ಲೆಡೆ ಕಾಣಿಸುತ್ತಿತ್ತು ಮತ್ತು ಕೇಳಿಸುತ್ತಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com