ಸಿಡ್ನಿ: ಈಗ ಎಲ್ಲೆಡೆ ನಿರಾಶ್ರಿತರ ಪರವಾಗಿ ದನಿ ಕೇಳಿಬರುತ್ತಿದೆ. ಅಯ್ಲಾನ್ ಕುರ್ದಿ ಸಾವಿನ ಹಿನ್ನೆಲೆಯಲ್ಲಿ ಮತ್ತು ವಲಸಿಗರು ಯುರೋಪಿಯನ್ ದೇಶಗಳತ್ತ ಆಶ್ರಯ ಅರಸಿ ಬರುತ್ತಿರುವವರು ಎದುರಿಸುತ್ತಿರುವ ಸಂಕಟಗಳನ್ನು ನಿವಾರಿಸುವುದಕ್ಕೆ ಆಗ್ರಹಿಸಿ ಸಿಡ್ನಿಯಲ್ಲಿ ಸೋಮವಾರ ರಾತ್ರಿ 10000 ಮಂದಿ ಉರಿಯುವ ಮೇಣದ ಬತ್ತಿಯೊಂದಿಗೆ ಪ್ರದರ್ಶನ ನಡೆಸಿದರು.
`ನನ್ನ ಮನೆಯಲ್ಲಿ ಒಂದು ರೂಮ್ ಇದೆ. ನೀವು ಬರಬಹುದು' ಎಂಬ ಪುಟ್ಟ ಬಾಲಕ ಹಿಡಿದ ಭಿತ್ತಿ ಪತ್ರ ಇಡೀ ಪ್ರದರ್ಶನದ ಆಕರ್ಷಣೆಯಾಗಿತ್ತು. ನೀವು ಆಸ್ಟ್ರೇಲಿಯಾಕ್ಕೆ ಬನ್ನಿ ಎಂಬ ಆಹ್ವಾನದ ಭಿತ್ತಿ ಪತ್ರಗಳು ಘೋಷಣೆಗಳು ಎಲ್ಲೆಡೆ ಕಾಣಿಸುತ್ತಿತ್ತು ಮತ್ತು ಕೇಳಿಸುತ್ತಿತ್ತು.
Advertisement