ರಾಯಭಾರಿ ಹತ್ಯೆ ಕುರಿತು ಭಾರತದ ವಿದೇಶಾಂಗ ಇಲಾಖೆ ಪ್ರತಿಕ್ರಿಯೆ ನೀಡಿದ್ದು, ಘಟನೆಯಿಂದ ತೀವ್ರ ನೋವು, ಅಘಾತ ಉಂಟಾಗಿದೆ. ಭಾರತ ಸರ್ಕಾರ ಮೃತರ ಕುಟುಂಬಕ್ಕೆ ಸಂತಾಪ ಸೂಚಿಸುತ್ತದೆ ಎಂದು ಹೇಳಿದೆ. ಅಂಕಾರಾದ ಕಲಾ ಗ್ಯಾಲರಿಯಲ್ಲಿ ಅಂಡ್ರ್ಯೂ ಕರ್ಲೋವ್ ಅವ್ ಅವರು ಭಾಷಣ ಮಾಡುತ್ತ ವೇಳೆ ಅವರ ಅಂಗರಕ್ಷನೇ ಗುಂಡಿಟ್ಟು ಹತ್ಯೆ ಮಾಡಿದ್ದ. ಈ ಘಟನೆ ಬಗ್ಗೆ ರಷ್ಯಾ ತೀವ್ರ ಅಸಮಾಧಾನ, ಆಕ್ರೋಶ ವ್ಯಕ್ತಪಡಿಸಿದ್ದು, ಇದನ್ನು ಭಯೋತ್ಪಾದಕ ದಾಳಿ ಎಂದು ಹೇಳಿದೆ.