ಕೊಲೊಂಬೋ: ಹವಾಲ ಹಗರಣದ ಆರೋಪದ ಹಿನ್ನೆಲೆಯಲ್ಲಿ ಶ್ರೀಲಂಕಾದ ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಪುತ್ರ ಸೇರಿದಂತೆ ಐವರನ್ನು ಶನಿವಾರ ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.
ರಾಜಪಕ್ಸೆ ಮಗ ಯೋಶಿತಾರನ್ನು ಬಂಧಿಸಿದ ಲಂಕಾ ಆರ್ಥಿಕ ಅಪರಾಧ ವಿಭಾಗದ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಐವರು ಬಂಧಿತರನ್ನೂ ಕೊಲೊಂಬೋದ ಸ್ಥಳೀಯ ಕೋರ್ಟ್ ಗೆ ಹಾಜರುಪಡಿಸಲಾಯಿತು.
ಐವರನ್ನೂ ಫೆ.13ರ ವರೆಗೆ ನ್ಯಾಯಾಂಗ ವಶಕ್ಕೆ ನೀಡಿ ಕೋರ್ಟ್ ಅದೇಶಿಸಿತು. ಈ ವೇಳೆ ರಾಜಪಕ್ಸೆ ಅವರೂ ಹಾಜರಿದ್ದರು. ಕ್ರಿಕೆಟ್ ಪ್ರಸಾರ ಹಕ್ಕನ್ನು ರಾಜಪಕ್ಸೆ ಅಧಿಕಾರಾವಧಿಯಲ್ಲಿ ಸಿಎಸ್ ಎನ್ ಗೆವಹಿಸಲಾಗಿತ್ತು. ಆವರೆಗೆ ಪ್ರಸಾರ ಹಕ್ಕು ಸರ್ಕಾರದ ಒಡೆತನದಲ್ಲಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಯುತ್ತಿದೆ.
Advertisement