ಪಶ್ಚಿಮ ಬಾಂಗ್ಲಾದಲ್ಲಿ ಹಿಂದೂ ಪುರೋಹಿತನ ಹತ್ಯೆ: ಉಗ್ರರ ಕೃತ್ಯದ ಶಂಕೆ

ಪಶ್ಚಿಮ ಬಾಂಗ್ಲಾದಲ್ಲಿ ಅಪರಿಚಿತ ದುಷ್ಕರ್ಮಿಗಳು ಹಿಂದೂ ಪುರೋಹಿತರೊಬ್ಬರನ್ನು ಹತ್ಯೆಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಢಾಕಾ: ಪಶ್ಚಿಮ ಬಾಂಗ್ಲಾದಲ್ಲಿ ಅಪರಿಚಿತ ದುಷ್ಕರ್ಮಿಗಳು ಹಿಂದೂ ಪುರೋಹಿತರೊಬ್ಬರನ್ನು ಹತ್ಯೆಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆನಂದ ಗೋಪಾಲ ಗಂಗೂಲಿ ಶಂಕಿತ ಉಗ್ರರಿಂದ ಹತ್ಯೆಗೊಳಗಾದ ಹಿಂದು ಪುರೋಹಿತರಾಗಿದ್ದಾರೆ. ಇಲ್ಲಿನ ಝೇನಿದ್ ಜಿಲ್ಲೆಯ ನೋಲ್ಡಾಂಗಾ ಪ್ರದೇಶದಲ್ಲಿರುವ ಅವರ ಮನೆ ಬಳಿ ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಗೋಪಿನಾಥ್ ಕಂಜಿಲಾಲ್ ತಿಳಿಸಿದ್ದಾರೆ. ಇಸ್ಲಾಮಿಕ್ ಸಂಘಟನೆಗೆ ಸೇರಿದ ಉಗ್ರರು ದಾಳಿ ನಡೆಸಿರಬಹುದಾದ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗುತ್ತಿದೆ.

ಹತ್ಯೆಗೊಳಗಾದ ಆನಂದ ಗೋಪಾಲ್ ಗಂಗೂಲಿ ಅವರ ತಲೆಯ ನೆತ್ತಿಯ ಭಾಗದಿಂದ ಕತ್ತಿನ ಭಾಗದವರೆಗೆ ಸೀಳಿ ಕ್ರೂರವಾಗಿ ಹತ್ಯೆಗೈಯ್ಯಲಾಗಿದೆ ಎಂದು ತಿಳಿಸಿದ್ದಾರೆ. ಕಳೆದ 10 ತಿಂಗಳಲ್ಲಿ ಇಸ್ಲಾಮಿಸ್ಟ್ ಜಿಹಾದಿಗಳಿಂದ ಹತ್ಯೆಯಾಗಿರುವ 10 ನೇ ವ್ಯಕ್ತಿಯಾಗಿದ್ದಾರೆ ಗಂಗೂಲಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com