ಸುಸ್ತಿದಾರ ಎನ್ನುವ ಮುನ್ನ ನಿಜಾಂಶ ಪರಿಶೀಲಿಸಿ: ಮಲ್ಯ

ನನ್ನನ್ನು ಸುಸ್ತಿದಾರ ಎಂದು ಕರೆಯುವ ಮುನ್ನ ನಿಜಾಂಶ ಪರಿಶೀಲನೆಯಾಗಬೇಕು ಎಂದು ವಿವಿಧ ಬ್ಯಾಂಕುಗಳಿಗೆ...
ವಿಜಯ್ ಮಲ್ಯ
ವಿಜಯ್ ಮಲ್ಯ
Updated on
ನವದೆಹಲಿ: ನನ್ನನ್ನು ಸುಸ್ತಿದಾರ ಎಂದು ಕರೆಯುವ ಮುನ್ನ ನಿಜಾಂಶ ಪರಿಶೀಲನೆಯಾಗಬೇಕು ಎಂದು ವಿವಿಧ ಬ್ಯಾಂಕುಗಳಿಗೆ ರು.9400 ಕೋಟಿ ಸಾಲ ಮರು ಪಾವತಿಸದೆ ದೇಶ ತೊರೆದಿರುವ ಉದ್ಯಮಿ ವಿಜಯ್ ಮಲ್ಯ ಹೇಳಿದ್ದಾರೆ. 
ಭಾರತೀಯ ಮಾದ್ಯಮಗಳು ನನ್ನನ್ನು ಸುಸ್ತಿದಾರ ಎಂದು ಕರೆಯುವ ಮುನ್ನ ನಿಜಾಂಶಗಳನ್ನು ಪರಿಶೀಲಿಸಬೇಕು ಎಂದು ವಿಜಯ್ ಮಲ್ಯ ತಿಳಿಸಿದ್ದಾರೆ. 
ಇನ್ನು ಬ್ಯಾಂಕುಗಳಿಗೆ ಕಿಂಗ್ ಫಿಶರ್ ಏರ್ ಲೈನ್ಸ್ ಹಣ ನೀಡಬೇಕು ಎಂದು ಒಪ್ಪಿಕೊಂಡಿರುವ ಮಲ್ಯ ಉದ್ದೇಶಪೂರ್ವಕ ಸುಸ್ತಿದಾರನೆಂದು ಹಣೆಪಟ್ಟಿಕಟ್ಟಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
17 ವಿವಿಧ ಬ್ಯಾಂಕುಗಳಲ್ಲಿ 9000 ಕೋಟಿ ಸಾಲ ಪಡೆದಿರುವ ವಿಜಯ್ ಮಲ್ಯ ಈಗ ವಿದೇಶದಲ್ಲಿ ನೆಲೆಸಿದ್ದಾರೆ. ಸಾಲಮರುಪಾವತಿ ಬಗ್ಗೆ ಮೂರು ಬಾರಿ ನೊಟೀಸ್ ಕಳುಹಿಸಿದರೂ ಪ್ರಯೋಜನವಾಗಿಲ್ಲ. ಈ ಹಿನ್ನಲೆಯಲ್ಲಿ ಅವರ ರಾಜತಾಂತ್ರಿಕ ಪಾಸ್ ಪೋರ್ಟ್ ಅನ್ನು ಸಹ ರದ್ದು ಮಾಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com