ನವಾಜ್ ಷರೀಫ್
ವಿದೇಶ
ಪಾಕ್ ಪ್ರಧಾನಿ ನವಾಜ್ ಷರೀಫ್ ವಿರುದ್ಧ ತನಿಖೆಗೆ 'ಸುಪ್ರೀಂ' ಆದೇಶ
ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್ಗೆ ಗಂಡಾಂತರ ಶುರುವಾಗಿದೆ. ಪನಾಮ ಪೇಪರ್ ಹಗರಣಕ್ಕೆ ಸಂಬಂಧಿಸಿದಂತೆ ನವಾಜ್ ಷರೀಫ್ ವಿರುದ್ಧ...
ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್ಗೆ ಗಂಡಾಂತರ ಶುರುವಾಗಿದೆ. ಪನಾಮ ಪೇಪರ್ ಹಗರಣಕ್ಕೆ ಸಂಬಂಧಿಸಿದಂತೆ ನವಾಜ್ ಷರೀಫ್ ವಿರುದ್ಧ ತನಿಖೆಗೆ ಸುಪ್ರೀಂಕೋರ್ಟ್ ಆದೇಶಿಸಿದೆ.
ನವಾಜ್ ಷರೀಫ್ ಮತ್ತು ಅವರ ಕುಟುಂಬದ ವಿರುದ್ಧ ಪಾಕಿಸ್ತಾನ ತೆಹರೀಕ್-ಇ-ಇನ್ಸಾಫ್ ಪಕ್ಷದ ಮುಖಂಡ ಇಮ್ರಾನ್ ಖಾನ್ ಸೇರಿದಂತೆ ಹಲವರು ಭ್ರಷ್ಟಾಚಾರ ಆರೋಪ ಮಾಡಿ ಅರ್ಜಿ ಸಲ್ಲಿಸಿದ್ದರು.
ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿಗಳಾದ ಅನ್ವರ್ ಜಹೀರ್ ಜಮಾಲಿ, ಅಸಿಫ್ ಸೈಯಿದ್ ಖಾನ್, ಅಮಿರ್ ಹನಿ ಮುಸ್ಲಿಂ, ಶೇಕ್ ಸೈಯದ್ ಮತ್ತು ಇಜಾಜುಲ್ ಅಸಾನ್ ಐವರನ್ನು ಒಳಗೊಂಡ ತಂಡ ಈ ಆದೇಶವನ್ನು ನೀಡಿದೆ.
ಈ ಪ್ರಕರಣ ಸಂಬಂಧ ತನಿಖಾ ತಂಡವನ್ನು ರಚಿಸಲು ಸುಪ್ರೀಂಕೋರ್ಟ್ ರೆಡಿ ಇದೆ ಎಂದು ನ್ಯಾಯಮೂರ್ತಿಗಳು ಹೇಳಿದೆ. ಅಲ್ಲದೆ ಸರ್ಕಾರ ಹಾಗೂ ಅರ್ಜಿದಾರರಿಗೆ ತಮ್ಮ ನಿಯಮವಳಿಗಳನ್ನು ತನಿಖಾ ತಂಡಕ್ಕೆ ನೀಡುವಂತೆ ಹೇಳಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ