ವಿದೇಶ
ಕಿಶನ್ ಗಂಗಾ, ರಾಟ್ಲೆ ಯೋಜನೆ ನಿರ್ಮಿಸಲು ಭಾರತಕ್ಕೆ ಅನುಮತಿ: ವಿಶ್ವಬ್ಯಾಂಕ್
1960ರ ಇಂಡಸ್ ವಾಟರ್ಸ್ ಟ್ರೀಟ್(ಐಡಬ್ಲ್ಯೂಟಿ) ಒಡಂಬಡಿಕೆಯ ಅಡಿಯಲ್ಲಿ ಕೆಲವು ನಿರ್ಬಂಧಗಳನ್ನು ಹೊಂದಿರುವ ನೀಲಮ್ ಮತ್ತು ಚೆನಾಬ್ ನದಿಗಳ ಉಪನದಿಗಳಲ್ಲಿ...
ವಾಷಿಂಗ್ಟನ್: 1960ರ ಸಿಂಧೂ ನದಿ ಜಲ ಒಪ್ಪಂದದ(ಐಡಬ್ಲ್ಯೂಟಿ) ಒಡಂಬಡಿಕೆಯ ಅಡಿಯಲ್ಲಿ ಕೆಲವು ನಿರ್ಬಂಧಗಳೊಂದಿಗೆ ನೀಲಮ್ ಮತ್ತು ಚೆನಾಬ್ ನದಿಗಳಲ್ಲಿ ಜಲವಿದ್ಯುತ್ ಶಕ್ತಿ ಸೌಲಭ್ಯಗಳನ್ನು ನಿರ್ಮಿಸಲು ಭಾರತಕ್ಕೆ ಅನುಮತಿ ನೀಡಲಾಗಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ.
ನೀಲಮ್ ಮತ್ತು ಚೆನಾಬ್ ನದಿ ಪಾತ್ರದಲ್ಲಿ ಭಾರತ ಕಿಶನ್ ಗಂಗಾ ಮತ್ತು ರಾಟ್ಲೆ ಜಲವಿದ್ಯುತ್ ಘಟಕಗಳ ಕಾಮಗಾರಿಯನ್ನು ಪ್ರಾರಂಭಿಸಿತ್ತು. ಈ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಭಾರತಕ್ಕೆ ಪಾಕ್ ಆಗ್ರಹಿಸಿತ್ತು. ಅಲ್ಲದೆ ಈ ಪ್ರಕರಣವನ್ನು ವಿಶ್ವಬ್ಯಾಂಕ್ ಗೂ ಕೊಂಡೊಯ್ದಿತ್ತು.
ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತ ಸರ್ಕಾರ ಕಿಶನ್ ಗಂಗಾ(330 ಮೆಘಾವಾಟ್ಸ್) ಮತ್ತು ರಾಟ್ಲೆ(850 ಮೆಘಾವಾಟ್ಸ್) ಜಲವಿದ್ಯುತ್ ಘಟಕಗಳ ಕಾಮಗಾರಿಯನ್ನು ಪ್ರಾರಂಭಿಸಿತ್ತು. ಇದೀಗ ಭಾರತ ಕಾಮಗಾರಿ ನಡೆಸುವಂತೆ ಸೂಚಿಸಿರುವ ಪಾಕ್ ವಿರುದ್ಧ ಭಾರತಕ್ಕೆ ಸಿಕ್ಕ ದೊಡ್ಡ ಜಯವಾಗಿದೆ.
ಸಿಂಧೂ ನದಿ ಜಲ ಒಪ್ಪಂದದ ಕುರಿತಂತೆ ವಿಶ್ವಬ್ಯಾಂಕ್ ನಲ್ಲಿ ಭಾರತ ಮತ್ತು ಪಾಕಿಸ್ತಾನದ ಅಧಿಕಾರಿಗಳ ಕಾರ್ಯದರ್ಶಿ ಮಟ್ಟದ ಮಾತುಕತೆಗಳು ನಡೆದ ಬಳಿಕ ಈ ಮಹತ್ವದ ಹೇಳಿಕೆ ನೀಡಿದೆ.
1960ರ ಸೆಪ್ಟೆಂಬರ್ 19ರಂದು ಕರಾಚಿಯಲ್ಲಿ ಸಿಂಧೂ ನದಿ ಜಲ ಒಪ್ಪಂದಕ್ಕೆ ಭಾರತ ಮತ್ತು ಪಾಕಿಸ್ತಾನ ಸಹಿ ಹಾಕಿದ್ದವು. ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರೂ ಮತ್ತು ಪಾಕಿಸ್ತಾನದ ಅಧ್ಯಕ್ಷ ಅಯೂಬ್ ಖಾನ್ ಅವರು ಒಪ್ಪಂದಕ್ಕೆ ಸಹಿ ಹಾಕಿದ್ದರು. ಈ ಒಪ್ಪಂದದ ಅನ್ವಯ ಪೂರ್ವದಲ್ಲಿ ಹರಿಯುವ ಬಿಯಾಸ್, ರಾವಿ, ಸಟ್ಲೇಜ್ ಭಾರತಕ್ಕೆ ಹಂಚಿಕೆ ಮಾಡಲಾಯಿತು. ಈ ನದಿಗಳು ಪಂಜಾಬ್ ನಿಂದ ಹರಿಯುತ್ತವೆ. ಪಶ್ಚಿಮದಲ್ಲಿರುವ ಸಿಂಧೂ, ಚೇನಬ್ ಮತ್ತು ಜೇಲಂ ಪಾಕಿಸ್ತಾನಕ್ಕೆ ಎಂದು ನಿರ್ಧರಿಸಲಾಯಿತು. ಈ ನದಿಗಳು ಜಮ್ಮು ಮತ್ತು ಕಾಶ್ಮೀರದಿಂದ ಹರಿಯುತ್ತವೆ.
ಕಾಶ್ಮೀರದಲ್ಲಿ ಉರಿಯಲ್ಲಿ ಸೇನಾ ಶಿಬಿರದ ಮೇಲೆ ಉಗ್ರರು ನಡೆಸಿದ ದಾಳಿ ಬಳಿಕ ಸಿಂಧೂ ನದಿ ಒಪ್ಪಂದವನ್ನು ಮರುಪರಿಶೀಲನೆಗೆ ಭಾರತ ಮುಂದಾಗಿತ್ತು.