ಖವರ್ ಖುರೇಷಿ
ಖವರ್ ಖುರೇಷಿ

ಜಾಧವ್ ಪ್ರಕರಣದಲ್ಲಿ ಭಾರತ ಇನ್ನೂ ಗೆದ್ದಿಲ್ಲ: ಪಾಕ್ ಪರ ವಕೀಲ ಖುರೇಷಿ

ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಭಾರತ ಸಂಪೂರ್ಣವಾಗಿ ಗೆದ್ದಿಲ್ಲ ಎಂದು ಪಾಕ್ ಪರ ವಕೀಲ ಖವರ್ ಖುರೇಷಿ ಹೇಳಿದ್ದಾರೆ.
ಇಸ್ಲಾಮಾಬಾದ್: ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಭಾರತ ಸಂಪೂರ್ಣವಾಗಿ ಗೆದ್ದಿಲ್ಲ ಎಂದು ಪಾಕ್ ಪರ ವಕೀಲ ಖವರ್ ಖುರೇಷಿ ಹೇಳಿದ್ದಾರೆ. 
ಸುದ್ದಿ ವಾಹಿನಿಯೊಂದಿಗೆ ಮಾತನಾಡಿರುವ ಖವರ್ ಖುರೇಷಿ, ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಭಾರತ ಗೆದ್ದಿಲ್ಲ ಹಾಗೂ ಐಸಿಜೆ ಜಾಧವ್ ನ್ನು ಪ್ರಕರಣದಿಂದ ಖುಲಾಸೆಗೊಳಿಸುವುದಿಲ್ಲ ಎಂದು ದಿ ನೇಷನ್ ವರದಿ ಮಾಡಿದೆ. ಖುರೇಷಿ ಬದಲಾಗಿ ಪಾಕ್ ಅಟಾರ್ನಿ ಜನರಲ್ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಲಿದ್ದಾರೆ ಎಂಬ ವರದಿಗಳು ಪ್ರಕಟವಾಗಿತ್ತು. 
ಕುಲಭೂಷಣ್ ಜಾಧವ್ ಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆಗೆ ಅಂತಾರಾಷ್ಟ್ರೀಯ ನ್ಯಾಯಾಲಯ ತಡೆ ನೀಡಿತ್ತು. ಈ ತೀರ್ಪನ್ನು ಭಾರತಕ್ಕೆ ದೊರೆತ ಮಹತ್ವದ ಮುನ್ನಡೆ ಎಂದು ವಿಶ್ಲೇಷಿಸಲಾಗುತ್ತಿದೆ. 

Related Stories

No stories found.

Advertisement

X
Kannada Prabha
www.kannadaprabha.com