ಹತ್ಯೆಯಾ ಮಾಡಿದ ವ್ಯಕ್ತಿಯನ್ನು ಉಮರ್ ರಷೀದ್ ದತ್ ಎಂದು ಗುರ್ತಿಸಲಾಗಿದೆ. ಅಚ್ಯುತ್ ವಿಚಿಟಾದಲ್ಲಿ ಕ್ಲಿನಿಕ್ ನಡೆಸುತ್ತಿದ್ದು, ಇದೇ ಕ್ಲಿನಿಕ್ ನಲ್ಲಿಯೇ ಬುಧವಾರ ರಾತ್ರಿ ರಷೀದ್ ಚಿಕಿತ್ಸೆ ಪಡೆದುಕೊಂಡಿದ್ದಾನೆ. ಬಳಿಕ ವೈದ್ಯರೊಂದಿಗೆ ಮಾತಿನ ಚಕಮಕಿಗಿಳಿದ ದುಷ್ಕರ್ಮಿ ಅಚ್ಯುತ್ ಅವರನ್ನು ಹಿಂಬಾಲಿಸಿಕೊಂಡು ಹೋಗಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಹತ್ಯೆ ಮಾಡಿದ್ದ ವ್ಯಕ್ತಿ ಅಚ್ಯುತ್ ಅವರ ರೋಗಿಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.