ಪರಿಸರ ಮತ್ತು ತಾಯ್ನಾಡಿನ ರಕ್ಷಣೆ ಮೇಲೆ ನಂಬಿಕೆ ಇರಬೇಕಾಗಿದ್ದು ಅದಕ್ಕೆ ಒತ್ತು ನೀಡುವ ಅವಶ್ಯಕತೆಯಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. ಭಾರತ ಈ ನಿಟ್ಟಿನಲ್ಲಿ ತನ್ನ ಕೆಲಸವನ್ನು ಮುಂದುವರಿಸಲಿದ್ದು ಪ್ಯಾರಿಸ್ ಒಪ್ಪಂದವನ್ನು ಮೀರಿ ಕಾರ್ಯನಿರ್ವಹಿಸಲಿದೆ. ಮುಂದಿನ ಜನಾಂಗ ಉತ್ತಮ ಜೀವನ ನಡೆಸುವುದು ನಮ್ಮ ಬದ್ಧತೆಯಾಗಿದೆ ಎಂದು ಹೇಳಿದ್ದಾರೆ.