ಬಾರತ ಹಾಗೂ ಪಾಕಿಸ್ತಾನ ಗಡಿಯಲ್ಲಿ ಕಳೆದ ಹತ್ತು ದಿನಗಳಿಂದ ಇರುವ ಉದ್ವಿಗ್ನ ಪರಿಸ್ಥಿತಿಯ ಕುರಿತು ಮಾತನಾಡಿದ ಅವರು " ಹತ್ತು ದಿನದಲ್ಲಿ ಏನಾಗಿದೆ...? ನಾವು ಸದಾ ಗಮನಿಸಿದ್ದೇವೆ. ತಾತ್ವಿಕವಾಗಿ ಉತ್ತಮ ಉದ್ದೇಶದ ಮಧ್ಯಸ್ಥಿಕೆಗೆ ಗುಟೆರೆಸ್ ಕಛೇರಿ ಯಾವಾಗಲೂ ತೆರೆದಿರುತ್ತದೆ, ಆದರೆ ಇದಕ್ಕಾಗಿ ಪ್ರತಿಯೊಬ್ಬರೂ ವಿಶ್ವಸಂಸ್ಥೆ ಸಹ ಒಳಗೊಂಡಂತೆ ಸಮ್ಮತಿ ಸೂಚಿಸಬೇಕಿದೆ. ಈ ವಿಚಾರದ ಬಗ್ಗೆ ನಾನು ನಿರ್ದಿಷ್ಟವಾಗಿ ಮಾತನಾಡುವುದಿಲ್ಲ, ಆದರೆ ಇಂತಹಾ ಸಮಸ್ಯೆಗಳು, ಯಾವುದೇ ವಿಷಯದ ಬಗ್ಗೆ, ಪ್ರಧಾನ ಕಾರ್ಯದರ್ಶಿಗಳ ಕಛೇರಿ ಮದ್ಯಸ್ಥಿಕೆ ವಹಿಸಲು ಯಾವಾಗಲೂ ಲಭ್ಯವಿರುತ್ತವೆ" ಎಂದು ಹೇಳಿದರು.