ಅಪ್ಘಾನಿಸ್ತಾನ : ಸಿಖ್ ರ ಮೇಲಿನ ದಾಳಿಗೆ ಭಾರತ ತೀವ್ರ ಖಂಡನೆ

ಅಪ್ಘಾನಿಸ್ತಾನದಲ್ಲಿರುವ ಸಿಖ್ ರ ಮೇಲಿನ ಉಗ್ರರ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದ್ದು, ಜಾಗತಿಕ ಭಯೋತ್ಪಾದನೆ ನಿರ್ಮೂಲನೆಗೆ ಎಲ್ಲಾ ರಾಷ್ಟ್ರಗಳು ಒಗ್ಗೂಡಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದೆ.
ದಾಳಿ ನಡೆದ ಸ್ಥಳ
ದಾಳಿ ನಡೆದ ಸ್ಥಳ

ಕಾಬೂಲ್ :  ಅಪ್ಘಾನಿಸ್ತಾನದಲ್ಲಿರುವ ಸಿಖ್ ರ ಮೇಲಿನ  ಉಗ್ರರ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದ್ದು, ಜಾಗತಿಕ ಭಯೋತ್ಪಾದನೆ  ನಿರ್ಮೂಲನೆಗೆ  ಎಲ್ಲಾ ರಾಷ್ಟ್ರಗಳು ಒಗ್ಗೂಡಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದೆ.

ಜಲಾಲ್ ಬಾದಿನಲ್ಲಿ ಅಪ್ಘಾನಿಸ್ತಾನದ ಅಧ್ಯಕ್ಷರ ಬೆಂಗಾವಲನ್ನು ಗುರಿಯಾಗಿಟ್ಟುಕೊಂಡು ಆತ್ಮಾಹತ್ಯಾ ಬಾಂಬರ್  ತಮ್ಮನ್ನು ತಾವೇ ಸ್ಪೋಟಿಸಿಕೊಂಡಿದ್ದರಿಂದ 20 ಮಂದಿ ಸಾವನ್ನಪ್ಪಿದ್ದಾರೆ. 
ಅಲ್ಪಸಂಖ್ಯಾತ ಸಮುದಾಯದ ಸದಸ್ಯರು  ಅಧ್ಯಕ್ಷ ಅಶ್ರಪ್ ಘಾನಿ ಅವರನ್ನು ಭೇಟಿ ಮಾಡಲು ರಾಜ್ಯಪಾಲರ ಮನೆ ಪ್ರವೇಶಿಸಿದಾಗ ಆತ್ಮಾಹತ್ಯಾ ಬಾಂಬರ್ ತಮ್ಮನ್ನು ತಾವೇ ಸ್ಪೋಟಿಸಿಕೊಂಡಿದ್ದಾರೆ  ಎಂದು ಪೊಲೀಸ್ ಮುಖ್ಯಸ್ಥ ಗುಲಾಂ ನಾಯ್  ಸ್ಟಾನಿಕ್ ಜಾಯ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com