ರವಾಂಡ ದೇಶಕ್ಕೆ 200 ಮಿಲಿಯನ್ ಡಾಲರ್ ಸಾಲದ ನೆರವು ನೀಡಿದ ಭಾರತ

ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರಮೋದಿ ರವಾಂಡ ಅಧ್ಯಕ್ಷ ಪೌಲ್ ಕಾಗಾಮೆ ಅವರೊಂದಿಗೆ ರಕ್ಷಣೆ, ವ್ಯಾಪಾರ, ಕೃಷಿ ವಲಯದಲ್ಲಿ ದ್ವಿಪಕ್ಷೀಯ ಬಾಂಧವ್ಯ ವೃದ್ದಿ ಸಂಬಂಧ ಮಾತುಕತೆ ನಡೆಸಿದರು.
ಪ್ರಧಾನಿ ಮೋದಿ, ರವಾಂಡ ಅಧ್ಯಕ್ಷ ಪೌಲ್ ಕಾಗಾಮೆ
ಪ್ರಧಾನಿ ಮೋದಿ, ರವಾಂಡ ಅಧ್ಯಕ್ಷ ಪೌಲ್ ಕಾಗಾಮೆ
ಕೈಗಾಲಿ:ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರಮೋದಿ ರವಾಂಡ ಅಧ್ಯಕ್ಷ ಪೌಲ್ ಕಾಗಾಮೆ ಅವರೊಂದಿಗೆ ರಕ್ಷಣೆ, ವ್ಯಾಪಾರ, ಕೃಷಿ ವಲಯದಲ್ಲಿ ದ್ವಿಪಕ್ಷೀಯ ಬಾಂಧವ್ಯ ವೃದ್ದಿ ಸಂಬಂಧ ಮಾತುಕತೆ ನಡೆಸಿದರು.
ಬಳಿಕ ಭಾರತ  ರವಾಂಡ ದೇಶಕ್ಕೆ ಸುಮಾರು 200 ಮಿಲಿಯನ್ ಅಮೆರಿಕನ್ ಡಾಲರ್ ನಷ್ಟು ಸಾಲದ ನೆರವನ್ನು  ಪ್ರಕಟಿಸಿದೆ.
ರವಾಂಡ ದೇಶಕ್ಕೆ ಭಾರತದ ಪ್ರಧಾನಿಯೊಬ್ಬರು ಇದೇ ಮೊದಲ ಬಾರಿಗೆ ಭೇಟಿ ಮಾಡಿದ್ದು, ಅಲ್ಲಿನ ಅಧ್ಯಕ್ಷ ಪೌಲ್ ಕಾಗಾಮೆ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ   ನರೇಂದ್ರಮೋದಿ ರುವಾಂಡದಲ್ಲಿ ಭಾರತ ಸದ್ಯದಲ್ಲಿಯೇ ಕಾರ್ಯಾಚರಣೆಯನ್ನು ಆರಂಭಿಸಲಿದೆ ಎಂದು ತಿಳಿಸಿದರು.
ರವಾಂಡದಲ್ಲಿ ಹೈ ಕಮೀಷನ್  ತೆರೆಯಲಾಗುವುದು, ಇದು ಉಭಯ ರಾಷ್ಟ್ರಗಳ ಸರ್ಕಾರಗಳ ನಡುವಿನ ಸಂವಹನಕ್ಕೆ ಸಾಧ್ಯವಾಗುವುದು ಮಾತ್ರವಲ್ಲದೇ, ರಾಯಬಾರಿಗಳು, ಪಾಸ್ ಪೊರ್ಟ್,  ವೀಸಾ, ಮತ್ತಿತರ ಸೌಲಭ್ಯಗಳನ್ನು ದೊರಕಿಸಿಕೊಡಲಿದೆ ಎಂದು ಮೋದಿ  ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಭಾರತ ಮತ್ತು ರವಾಂಡ ಸಂಬಂಧಗಳು ಸಮಯದ ಪರೀಕ್ಷೆಗೆ ನಿಂತಿವೆ ಎಂದು ಹೇಳಿದ ಅವರು, ರವಾಂಡದ  ಆರ್ಥಿಕ ಅಭಿವೃದ್ದಿಯ ಪಯಣದಲ್ಲಿ ಭಾರತ ಬೆಂಬಲ ನೀಡಲಿದೆ ಎಂದು ಮೋದಿ ತಿಳಿಸಿದರು.
ನಂತರ  ನಿಯೋಗಮಟ್ಟದ ಮಾತುಕತೆಯಲ್ಲಿ ಪಾಲ್ಗೊಂಡಿದ್ದ ಉಭಯ ನಾಯಕರು  ವ್ಯಾಪಾರ, ಹೂಡಿಕೆಯಲ್ಲಿ ಸಾಮರ್ಥ್ಯ ಬಲವರ್ದನೆ, ಅಭಿವೃದ್ದಿಯಲ್ಲಿ ಪಾಲುದಾರಿಕೆ ಸಂಬಂಧಿಸಿದಂತೆ ಮಾತುಕತೆ ನಡೆಸಿದರು. ರಕ್ಷಣೆ, ವ್ಯಾಪಾರ, ಕೃಷಿ ವಲಯದಲ್ಲಿ ದ್ವಿಪಕ್ಷೀಯ ಬಾಂಧವ್ಯ ವೃದ್ದಿ ಸಂಬಂಧದ ಒಪ್ಪಂದಕ್ಕೆ ಸಹಿ ಹಾಕಿದರು.
ಭಾರತ ಮೊದಲ ಹಂತದಲ್ಲಿ ಇಂಡಸ್ಟ್ರೀಯಲ್ ಪಾರ್ಕ್ ಅಭಿವೃದ್ದಿ ಹಾಗೂ ಕೈಗಾಲಿ ವಿಶೇಷ ಆರ್ಥಿಕ ವಲಯಕ್ಕಾಗಿ    100 ಮಿಲಿಯನ್ ಡಾಲರ್ ಹಾಗೂ  ಕೃಷಿಗಾಗಿ ಎರಡನೇ ಹಂತದಲ್ಲಿ 100 ಮಿಲಿಯನ್ ಡಾಲರ್   ಸಾಲದ ನೆರವನ್ನು ಪ್ರಕಟಿಸಿತು.
 ಪ್ರಧಾನಿ ಮೋದಿ ಅವರ ಭೇಟಿಯಿಂದಾಗಿ ರವಾಂಡ ಭಾರತ ನಡುವಣ  ಸ್ನೇಹ, ಸಹಕಾರದಲ್ಲಿ ಹೊಸ  ಮೈಲುಗಲ್ಲು ಸ್ಥಾಪಿಸಿದಂತಾಗಿದೆ ಎಂದು ರವಾಂಡ ಅಧ್ಯಕ್ಷ ಪೌಲ್ ಕಾಗಾಮೆ ಹೇಳಿದರು.
ಮೂರು ಆಫ್ರಿಕಾ ರಾಷ್ಟ್ರಗಳ  ಪ್ರವಾಸದ ಮೊದಲ ಚರಣದಲ್ಲಿ ಪ್ರಧಾನಿ ಮೋದಿ ರವಾಂಡಕ್ಕೆ  ಭೇಟಿ ನೀಡಿದ್ದು, ಕೈಗಾಲಿ ವಿಮಾನ ನಿಲ್ದಾಣದಲ್ಲಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com