ಕಾರ್ಯಕ್ರಮದಲ್ಲಿ ಮಾತನಾಡಿರುವ ಕೇಂದ್ರ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ಅವರು, ಬರ್ಲಿನ್ ಗೋಡೆ ಧರೆಗುರುಳಿದ್ದು, ಭಾರತ ಹಾಗೂ ಪಾಕಿಸ್ತಾನದ ನಡುವಿನ ವೈರತ್ವ ಕೂಡ ಕರ್ತಾರ್ಪುರ ಕಾರಿಡಾರ್ ಮೂಲಕ ದೂರಾಗಬಹುದು. ಬಾಬಾ ನಾನಕ್ ಅವರ ಹೆಸರಿನಲ್ಲಿ ಇದೊಂದು ಹೊಸ ಆರಂಭ. ಇಲ್ಲಿ ಯಾರೂ ಹಿಂದೂ, ಮುಸ್ಲಿಮರಿಲ್ಲ, ಎಲ್ಲರೂ ಒಂದೇ ಎಂದು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಅವರು ಇಮ್ರಾನ್ ಖಾನ್ ಅವರನ್ನು ಕೊಂಡಾಡಿದ್ದಾರೆ.
ನಾವು ಮುಂದಕ್ಕೆ ಸಾಗಬೇಕೆಂದು ಎರಡೂ ಸರ್ಕಾರಗಳು ಮನವರಿಕೆ ಮಾಡಿಕೊಳ್ಳಬೇಕಿದೆ. ಪಂಜಾಬ್'ನ ಸಂದೇಶ ಲಾಹೋರ್ ವರೆಗೂ ತಲುಪಬೇಕೆಂದು ನನ್ನ ತಂದೆ ನನಗೆ ಹೇಳುತ್ತಿದ್ದರು. ಪೇಶಾವರ ಹಾಗೂ ಅಫ್ಗಾನಿಸ್ತಾನದ ವರೆಗೂ ಹೋಗಬೇಕೆಂದು ನಾನು ಬಯಸಿದ್ದೇನೆಂದು ಸಿಧು ಹೇಳಿದ್ದಾರೆ.