ಮೆಹುಲ್ ಚೋಕ್ಸಿ ನಾಗರಿಕತ್ವ ರದ್ದು ಮಾಡಲು ಆ್ಯಂಟಿಗುವಾ ಸರ್ಕಾರ ನಿರ್ಧಾರ!

ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಮತ್ತೊಂದು ರಾಜತಾಂತ್ರಿಕ ಗೆಲುವು ಸಂದಿದ್ದು, ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮೆಹುಲ್ ಚೋಕ್ಸಿಗೆ ನೀಡಿದ್ದ ನಾಗರಿಕತ್ವವನ್ನು ರದ್ದುಗೊಳಿಸಲು ಆ್ಯಂಟಿಗುವಾ ಸರ್ಕಾರ ನಿರ್ಧರಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ನವದೆಹಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಮತ್ತೊಂದು ರಾಜತಾಂತ್ರಿಕ ಗೆಲುವು ಸಂದಿದ್ದು, ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮೆಹುಲ್ ಚೋಕ್ಸಿಗೆ ನೀಡಿದ್ದ ನಾಗರಿಕತ್ವವನ್ನು ರದ್ದುಗೊಳಿಸಲು ಆ್ಯಂಟಿಗುವಾ ಸರ್ಕಾರ ನಿರ್ಧರಿಸಿದೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಆ್ಯಂಟಿಗುವಾ ಪ್ರಧಾನಿ ಗ್ಯಾಸ್ಟನ್ ಬ್ರೌನೆ ಅವರು, ಮೆಹುಲ್ ಚೋಕ್ಸಿಗೆ ಈಗಾಗಲೇ ನಾಗರಿಕತ್ವ ಪ್ರಧಾನ ಮಾಡಲಾಗಿದೆ. ಆದರೆ ಆತನ ವಿರುದ್ಧ ಆರೋಪಗಳು ಸಾಬೀತಾದರೆ ಖಂಡಿತಾ ನಾಗರಿಕತ್ವವನ್ನು ರದ್ದುಗೊಳಿಸುತ್ತೇವೆ. ಅಲ್ಲದೆ ಆತನನ್ನು ಭಾರತಕ್ಕೆ ವಾಪಸ್ ರವಾನಿಸುತ್ತೇವೆ. ಆ್ಯಂಟಿಗುವಾ ಎಂದಿಗೂ ಆರ್ಥಿಕ ಅಪರಾಧಿಗಳ ಸುರಕ್ಷಿತ ತಾಣವಲ್ಲ. ಆಗಲೂ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಮೆಹುಲ್ ಚೋಕ್ಸಿ ವಿರುದ್ಧ ವಿವಿಧ ಆರೋಪಗಳಿರಬಹುದು. ಆದರೆ ತನ್ನ ವಿರುದ್ಧ ಕೇಳಿ ಬಂದಿರುವ ಆರೋಪಗಳಿಗೆ ಸಂಬಂಧಿಸಿದಂತೆ ವಾದ ಮಂಡಿಸಲು ಅವರಿಗೂ ಒಂದು ಅವಕಾಶ ನೀಡಬೇಕು. ಏಕಪಕ್ಷೀಯವಾಗಿ ನಿರ್ಣಯ ಕೈಗೊಳ್ಳುವುದು ಸರಿಯಲ್ಲ. ಆದರೆ ಒಂದಂತೂ ಹೇಳ ಬಲ್ಲೆ ಆತ ತನ್ನ ಎಲ್ಲ ರೀತಿಯ ಕಾನೂನು ಕ್ರಮಗಳನ್ನು ಪೂರ್ಣಗೊಳಿಸಿದ ಬಳಿಕ ಆತನನ್ನು ಖಂಡಿತಾ ಭಾರತಕ್ಕೆ ರವಾನಿಸುತ್ತೇವೆ ಎಂದು ಬ್ರೌನೆ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com