ಪುಲ್ವಾಮಾದಲ್ಲಿ ಫೆಬ್ರವರಿ 14ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ ನಲವತ್ತಕ್ಕೆ ಹೆಚು ಸಿಆರ್ ಪಿಎಫ್ ಯೋಧರು ಸಾವನ್ನಪ್ಪಿದ ಬಳಿಕ ಭಾರತ-ಪಾಕ್ ಗಡಿಯಲ್ಲಿ ಉದ್ವಿಗ್ನ ವಾತಾವರಣವಿದೆ. ಅಲ್ಲದೆ ಫೆಬ್ರವರಿ ೨೬ಕ್ಕೆ ಭಾರತ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಬಾಲ್ ಕೋಟ್, ಮುಜಾಫರಾಬಾದ್ ಮೊದಲಾದೆಡೆ ನಡೆಸಿದ ವಿಮಾನಿಕ ದಾಳಿಯಲ್ಲಿ ಜೆಇಎಂ ಗೆ ಸೇರಿದ್ದ ಬಹುದೊಡ್ಡ ಉಗ್ರ ತರಬೇತಿ ಕೇಂದ್ರ ದ್ವಂಸವಾಗಿದೆ. ಇದರಿಂದ ಪಾಕಿಸ್ತಾನಕ್ಕೆ ಅಂತರಾಷ್ಟ್ರೀಯ ಒತ್ತಡಗಳು ಹೆಚ್ಚಿ ಇದೀಗ ಭಯೋತ್ಪಾದನೆಗೆ, ಉಗ್ರರಿಗೆ ಸಹಾಯ ನೀಡುವುದನ್ನು ತಡೆಯಲು ಮುಂದಾಗಿದೆ. ಅಲ್ಲದೆ ಹಲವು ಉಗ್ರ ಸಂಘಟನೆ ನಾಯಕರನ್ನು, ಮದ್ರಸಾಗಳನ್ನು ವಶಕ್ಕೆ ಪಡೆದಿದೆ.