ಲಂಡನ್: ಚಾಕು ಇರಿದು ಭಾರತ ಮೂಲದ ವ್ಯಕ್ತಿಯ ಕೊಲೆ

ಲಂಡನ್ ನಲ್ಲಿ ದುಷ್ಕರ್ಮಿಗಳು ಚಾಕು ಇರಿದು ಭಾರತ ಮೂಲದ ವ್ಯಕ್ತಿಯನ್ನು ಕೊಲೆ ಮಾಡಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.
ಮೃತ ನದೀಮುದ್ದೀನ್ ಮತ್ತು ಟೆಸ್ಕೋ ಪಾರ್ಕ್ ಸೂಪರ್ ಮಾರ್ಕೆಟ್
ಮೃತ ನದೀಮುದ್ದೀನ್ ಮತ್ತು ಟೆಸ್ಕೋ ಪಾರ್ಕ್ ಸೂಪರ್ ಮಾರ್ಕೆಟ್
ಲಂಡನ್: ಲಂಡನ್ ನಲ್ಲಿ ದುಷ್ಕರ್ಮಿಗಳು ಚಾಕು ಇರಿದು ಭಾರತ ಮೂಲದ ವ್ಯಕ್ತಿಯನ್ನು ಕೊಲೆ ಮಾಡಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.
ಲಂಡನ್ ಟೆಸ್ಕೋ ಪಾರ್ಕ್ ಸೂಪರ್ ಮಾರ್ಕೆಟ್ ನಲ್ಲಿ ಕೆಲಸ ಮಾಡುತ್ತಿದ್ದ ಹೈದರಾಬಾದ್ ಮೂಲದ ಮೊಹಮದ್ ನದೀಮುದ್ದೀನ್ ರನ್ನು ದುಷ್ಕರ್ಮಿಗಳು ಚಾಕು ಇರಿದು ಕೊಂದು ಹಾಕಿದ್ದಾರೆ. ಲಂಡನ್ ನ ಬರ್ಕ್ ಶೈರ್ ನ ವೆಲ್ಲಿಂಗ್ಟನ್ ಸ್ಟ್ರೀಟ್ ನಲ್ಲಿರುವ ಟೆಸ್ಕೋ ಪಾರ್ಕ್ ಸೂಪರ್ ಮಾರ್ಕೆಟ್ ನ ಪಾರ್ಕಿಂಗ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮೊಹಮದ್ ನದೀಮುದ್ದೀನ್ ರನ್ನು ಇರಿದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೊಹಮದ್ ನದೀಮುದ್ದೀನ್ ಅವರನ್ನು ಸ್ಛಳೀಯರು ಕೂಡಲೇ ಆಸ್ಪತ್ರೆಗೆ ಸೇರಿಸಲು ಮುಂದಾದಾರಾದರೂ, ಆಂಬುಲೆನ್ಸ್ ನಲ್ಲಿಯೇ ಮೊಹಮದ್ ನದೀಮುದ್ದೀನ್ ರ ಪ್ರಾಣ ಪಕ್ಷಿ ಹಾರಿ ಹೋಗಿತ್ತು ಎಂದು ತಿಳಿದುಬಂದಿದೆ.
ಮೃತ ನದೀಮುದ್ದೀನ್ ಹೈದರಾಬಾದ್ ಮೂಲದವರಾಗಿದ್ದು ಕಳೆದ ಆರು ವರ್ಷಗಳಿಂದ ಲಂಡನ್ ನಲ್ಲಿ ನೆಲೆಸಿದ್ದರು. ಪ್ರಸ್ತುತ ನದೀಮುದ್ದಿನ್ ಸಾವಿನ ವಿಚಾರ ಕೇಳಿ ಆಘಾತಕ್ಕೀಡಾಗಿರುವ ಕುಟುಂಬಸ್ಥರು ನೆರವಿಗಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಸ್ಥಳೀಯ ಪೊಲೀಸ್ ಅಧಿಕಾರಿ ಲ್ಯಾನ್ ಹಂಟರ್ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಸುತ್ತಮುತ್ತ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸುತ್ತಿದ್ದೇವೆ. ಶೀಘ್ರ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com