ಇಸ್ಲಾಮಾಬಾದ್: ಕಾಶ್ಮೀರ ವಿಚಾರ ಭಾರತದ ಆಂತರಿಕ ವಿಷಯ, ಇದರಲ್ಲಿ ನೀವು ತಲೆಹಾಕಬೇಡಿ ಎಂದು ಪಾಕಿಸ್ತಾನಕ್ಕೆ ಹೇಳಿದ ರಾಹುಲ್ ಗಾಂಧಿ ಮಾತಿಗೆ ಪಾಕಿಸ್ತಾನ ಸಚಿವ ಫವದ್ ಹುಸೇನ್ ಪ್ರತಿಕ್ರಿಯಿಸಿದ್ದಾರೆ.
ನಿಮ್ಮ ರಾಜಕೀಯದ ಜೀವನ ಬಹಳ ಗೊಂದಲಮಯವಾಗಿದೆ. ನೀವು ವಾಸ್ತವಕ್ಕೆ ಹತ್ತಿರವಾದ ನಿಲುವು ತೆಗೆದುಕೊಳ್ಳಿ. ನಿಮ್ಮ ಮುತ್ತಾತ ಪಂಡಿತ್ ಜವಹರಲಾಲ್ ನೆಹರೂ ಅವರಂತೆ ಎತ್ತರಕ್ಕೆ ಬೆಳೆಯಿರಿ, ನೆಹರೂ ಅವರು ಭಾರತದ ಜಾತ್ಯತೀತತೆ ಮತ್ತು ವಿಶಾಲ ಮನಸ್ಸು ಹೊಂದಿದವರಾಗಿದ್ದರು ಎಂದು ಹುಸೇನ್ ಟ್ವೀಟ್ ಮಾಡಿದ್ದಾರೆ. ಉರ್ದು ಕವಿ ಫೈಝ್ ಅಹ್ಮದ್ ಫೈಝ್ ಅವರ ಕವನದ ಸಾಲುಗಳನ್ನು ಉಲ್ಲೇಖಿಸಿದ್ದಾರೆ.
ಜಮ್ಮು-ಕಾಶ್ಮೀರ ವಿಚಾರದಲ್ಲಿ ವಿಶ್ವಸಂಸ್ಥೆಗೆ ಸಲ್ಲಿಸಿದ ದೂರಿನಲ್ಲಿ ಪಾಕಿಸ್ತಾನ ರಾಹುಲ್ ಗಾಂಧಿಯವರ ಹೆಸರನ್ನು ಅನವಶ್ಯಕವಾಗಿ ಎಳೆದು ತರುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.
Advertisement