ಎಚ್ಚರಿಕೆಯ ನಡುವೆಯೂ ರೈತರ ಪ್ರತಿಭಟನೆಗೆ ಜಸ್ಟಿನ್ ಟ್ರುಡೋ ಬೆಂಬಲ; ಕೆನಡಾ ನೇತೃತ್ವದ ಕೋವಿಡ್ ಸಭೆಗೆ ಜೈ ಶಂಕರ್ ಬಹಿಷ್ಕಾರ

ಭಾರತದ ವಿದೇಶಾಂಗ ಸಚಿವಾಲಯದ ಎಚ್ಚರಿಕೆಯ ಹೊರತಾಗಿಯೂ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಮೊಂಡಾಟ ಪ್ರದರ್ಶಿಸಿದ್ದು, ಮತ್ತೆ ಭಾರತದ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.
ಕೆನಡಾ ಪ್ರಧಾನಿ
ಕೆನಡಾ ಪ್ರಧಾನಿ
Updated on

ನವದೆಹಲಿ: ಭಾರತದ ವಿದೇಶಾಂಗ ಸಚಿವಾಲಯದ ಎಚ್ಚರಿಕೆಯ ಹೊರತಾಗಿಯೂ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಮೊಂಡಾಟ ಪ್ರದರ್ಶಿಸಿದ್ದು, ಮತ್ತೆ ಭಾರತದ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.

ಮತ್ತೆ ತಮ್ಮ ಈ ಹಿಂದಿನ ಹೇಳಿಕೆಯನ್ನೇ ಪುನರುಚ್ಚರಿಸಿರುವ ಜಸ್ಟಿನ್ ಟ್ರೂಡೋ ಕೆನಡಾ ಶಾಂತಿಯುತ ಪ್ರತಿಭಟನೆಯ ಹಕ್ಕುಗಳಿಗೆ ಎಂದಿಗೂ ಬೆಂಬಲ ನೀಡುತ್ತದೆ ಎಂದು ಹೇಳಿದ್ದಾರೆ. 

ಇದೇ ವೇಳೆ ಬ್ರಿಟನ್ ನ ಸಿಖ್ ಪರಿಷತ್ ಸಹ ಕೆನಡಾ ಪ್ರಧಾನಿಗಳ ಹೇಳಿಕೆಗೆ ಎಲ್ಲಾ ರಾಜಕಾರಣಿಗಳೂ ಬೆಂಬಲಿಸಬೇಕೆಂದು ಒತ್ತಡ ಹೇರಿದೆ.

"ಭಾರತದ ಅಧಿಕಾರಿಗಳು ನಡೆಸುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ವಿರೋಧಿಸುತ್ತಿರುವ ಜಸ್ಟಿನ್ ಟ್ರೂಡೋ ಅರಿಗೆ ಎಲ್ಲಾ ರಾಜಕಾರಣಿಗಳೂ ಬೆಂಬಲ ನೀಡಬೇಕು" ಎಂದು ಬ್ರಿಟನ್ ನ ಸಿಖ್ ಪರಿಷತ್ ಟ್ವೀಟ್ ಮೂಲಕ ಆಗ್ರಹಿಸಿದೆ.

ಇನ್ನು ಮೊಂಡುತನ ಪ್ರದರ್ಶಿಸುತ್ತಿರುವ ಕೆನಡಾ ಸರ್ಕಾರದ ವರ್ತನೆಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ತೀಕ್ಷ್ಣ ಪ್ರತಿಕ್ರಿಯೆ ನೀಡತೊಡಗಿದೆ. 

ಮುಂದಿನ ವಾರ ಕೆನಡಾದ ನೇತೃತ್ವದಲ್ಲಿ ಕೋವಿಡ್-19 ಸಂಬಂಧ ನಡೆಯಬೇಕಿದ್ದ ವಿದೇಶಾಂಗ ಸಚಿವರುಗಳ ಸಭೆಯನ್ನು ಬಹಿಷ್ಕರಿಸಲು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ತೀರ್ಮಾನಿಸಿದ್ದಾರೆ. 

ಕೋವಿಡ್-19 ಗೆ ಸಂಬಂಧಿಸಿದಂತೆ ನವೆಂಬರ್ ತಿಂಗಳಲ್ಲಿ ನಡೆದ ಮಂತ್ರಿಗಳ ಸಮನ್ವಯ ಗುಂಪಿನ 11ನೇ ಸಭೆಯಲ್ಲಿ ಮೊದಲ ಬಾರಿಗೆ ಭಾರತ ಅಧಿಕೃತವಾಗಿ ಭಾಗವಹಿಸಿತ್ತು. 

ಈ ಬಾರಿ ಕೆನಡಾ ನೇತೃತ್ವದಲ್ಲಿ ನಡೆದ ಸಭೆಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಗೆ ಆಹ್ವಾನ ನೀಡಲಾಗಿತ್ತು. ಆದರೆ ರೈತರ ಪ್ರತಿಭಟನೆ ಸಂಬಂಧ ಕೆನಡಾ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಸಭೆಯನ್ನು ಬಹಿಷ್ಕರಿಸಲು ಭಾರತ ನಿರ್ಧರಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com