ನದಿಗಳ ಸ್ವಚ್ಛತೆ, ಪುನಶ್ಚೇತನಕ್ಕೆ ಭಾರತದ ಕ್ರಮ ಶ್ಲಾಘಿಸಿದ ಅಂತಾರಾಷ್ಟ್ರೀಯ ಬ್ಯಾಂಕ್

ಕೇವಲ ಐದು ವರ್ಷಗಳ ಹಿಂದೆ ಭಾರತದಲ್ಲಿ ಬಯಲುಶೌಚದ ಸಮಸ್ಯೆ ತೀವ್ರವಾಗಿತ್ತು. ಸುಮಾರು 55 ಕೋಟಿ ಜನ ಬಯಲುಶೌಚವನ್ನೇ ಆಶ್ರಯಿಸಿದ್ದರು. ಭಾರತ ಸರ್ಕಾರ ಕೈಗೊಂಡ ವ್ಯಾಪಕ ಕ್ರಮಗಳಿಂದಾಗಿ ಈಗ ಚಿತ್ರಣ ಬದಲಾಗಿದೆ.
ಗಂಗಾ ನದಿ
ಗಂಗಾ ನದಿ
Updated on

ವಾಷಿಂಗ್ಟನ್‌: ನದಿಗಳ ಸ್ವಚ್ಛತೆ ಹಾಗೂ ಪುನಶ್ಚೇತನಕ್ಕಾಗಿ ಭಾರತ ಕೈಗೊಂಡ  ಕ್ರಮಗಳನ್ನು ಅಂತಾರಾಷ್ಟ್ರೀಯ ಬ್ಯಾಂಕ್ ಶ್ಲಾಘಿಸಿದೆ.

ಪುನರ್ ನಿರ್ಮಾಣ ಹಾಗೂ ಅಭಿವೃದ್ಧಿ ಅಂತಾರಾಷ್ಟ್ರೀಯ ಬ್ಯಾಂಕ್ ನ ಹಿರಿಯ ಜಲತಜ್ಞ ಕ್ಸೇವಿಯರ್ ಚಾವೆಟ್ ಬ್ಯುಶೆನ್ ತಮ್ಮ ಹೇಳಿಕೆಯಲ್ಲಿ, ನೀರು ಪೂರೈಕೆ, ಸ್ವಚ್ಛತೆ ಮತ್ತು ಪುನಶ್ಚೇತನಕ್ಕಾಗಿ ಭಾರತ ಆರಂಭಿಸಿದ ಯೋಜನೆಗಳು ಮತ್ತು ಕ್ರಮಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೇವಲ ಐದು ವರ್ಷಗಳ ಹಿಂದೆ ಭಾರತದಲ್ಲಿ ಬಯಲುಶೌಚದ ಸಮಸ್ಯೆ ತೀವ್ರವಾಗಿತ್ತು. ಸುಮಾರು 55 ಕೋಟಿ ಜನ ಬಯಲುಶೌಚವನ್ನೇ ಆಶ್ರಯಿಸಿದ್ದರು. ಭಾರತ ಸರ್ಕಾರ ಕೈಗೊಂಡ ವ್ಯಾಪಕ ಕ್ರಮಗಳಿಂದಾಗಿ ಈಗ ಚಿತ್ರಣ ಬದಲಾಗಿದೆ. ಇದರಿಂದ ಜನರ ದೃಷ್ಟಿಕೋನದಲ್ಲೂ ಬದಲಾವಣೆಯಾಗಿದೆ ಎಂದು ಅವರು ಶ್ಲಾಘಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com