ಹಂದ್ವಾರ ದಾಳಿಗೆ ಹೊಣೆ ಹೊತ್ತ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ, ಭಾರತದ್ದೇ ಕೈ ಮೇಲಾಯಿತು ಎಂದ ಉಗ್ರರು! 

ಜಮ್ಮು-ಕಾಶ್ಮೀರದ ಹಂದ್ವಾರದಲ್ಲಿ ಭಯೋತ್ಪಾದಕರ ಎನ್ ಕೌಂಟರ್ ನಡೆದು 5 ದಿನಗಳು ಕಳೆದ ಬಳಿಕ ಅಲ್ಲಿನ ಘಟನಾವಳಿಗಳಿಗೆ ಉಗ್ರ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ಹೊಣೆ ಹೊತ್ತಿದೆ. 
ಹಂದ್ವಾರ ದಾಳಿಯ ಹುತಾತ್ಮ ಯೋಧರು
ಹಂದ್ವಾರ ದಾಳಿಯ ಹುತಾತ್ಮ ಯೋಧರು
Updated on

ನವದೆಹಲಿ: ಜಮ್ಮು-ಕಾಶ್ಮೀರದ ಹಂದ್ವಾರದಲ್ಲಿ ಭಯೋತ್ಪಾದಕರ ಎನ್ ಕೌಂಟರ್ ನಡೆದು 5 ದಿನಗಳು ಕಳೆದ ಬಳಿಕ ಅಲ್ಲಿನ ಘಟನಾವಳಿಗಳಿಗೆ ಉಗ್ರ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ಹೊಣೆ ಹೊತ್ತಿದೆ. 

ಪಾಕಿಸ್ತಾನದ ಮೂಲದ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಉಗ್ರರ ವಿರುದ್ಧ ಹಂದ್ವಾರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಐವರು ಭದ್ರತಾ ಸಿಬ್ಬಂದಿಗಳು ಸಾವನ್ನಪ್ಪಿದ್ದರು. ಈ ಘಟನೆಯ ಬಗ್ಗೆ ಸಂಘಟನೆಯ ಮುಖ್ಯಸ್ಥ ಸಯೀದ್ ಸಲಾಹುದ್ದೀನ್ ಮಾತನಾಡಿರುವ ವಿಡಿಯೋವನ್ನು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ ಹಂದ್ವಾರ ಘಟನೆಗೆ ಹಿಜ್ಬುಲ್ ಮುಜಾಹಿದ್ದೀನ್ ಉಗ್ರರರೇ ಕಾರಣ ಎಂದು ಹೇಳಿರುವ ಸಯೀದ್ ಸಲಾಹುದ್ದೀನ್, ಉಗ್ರ ವಿರೋಧಿ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ ಮೇಲುಗೈ ಸಾಧಿಸಿದೆ ಎಂದೂ ಹೇಳಿದ್ದಾನೆ. 

ಹಂದ್ವಾರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ ಮೇಲುಗೈ ಸಾಧಿಸಿದ್ದು, ಆಘಾತಕಾರಿಯಾಗಿದೆ. ಆದರೆ ಕಾಶ್ಮೀರದಲ್ಲಿ ಬಲಿದಾನ ಬಹಳ ಹಿಂದಿನಿಂದಲೂ ನಡೆದುಕೊಂಡುಬಂದಿದೆ. ಹಂದ್ವಾರದಲ್ಲಿ ಮುಜಾಹಿದ್ದೀನ್ ಗಳು ಶತೃಗಳ(ಭಾರತೀಯ ಸೇನೆ) ಬೆನ್ನು ಮೂಳೆ ಮುರಿದಿದ್ದರು. ಆದರೆ ಭಾರತೀಯ ಸೇನೆಯದ್ದೇ ಮೇಲುಗೈ ಆಗಿದೆ ಎಂದು ಸಯೀದ್ ಸಲಾಹುದ್ದೀನ್ ಹೇಳಿರುವುದು ವಿಡಿಯೋದಲ್ಲಿ ದಾಖಲಾಗಿದೆ.    

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com