ಉದ್ವಿಗ್ನತೆ  ನಿವಾರಣೆಗೆ ಶ್ರಮಿಸುವಂತೆ ಜಾಗತಿಕ ನಾಯಕರಿಗೆ ವಿಶ್ವಸಂಸ್ಥೆ ಮನವಿ

ಅಮೆರಿಕ ಪಡೆಗಳು ಇರಾನ್ ಸೇನಾ ಕಮಾಂಡರ್ ಖಾಸಿಂ ಸೊಲೈಮಾನಿ  ಹತ್ಯೆ ನಡೆಸಿದ  ನಂತರ ಉದ್ಬವವಾಗಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆ  ನಿವಾರಣೆಗೆ ಶ್ರಮಿಸುವಂತೆ  ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ವಿಶ್ವ ನಾಯಕರಿಗೆ ಮನವಿ ಮಾಡಿದ್ದಾರೆ 
ಆಂಟೋನಿಯೊ ಗುಟೆರೆಸ್
ಆಂಟೋನಿಯೊ ಗುಟೆರೆಸ್

ನ್ಯೂಯಾರ್ಕ್: ಅಮೆರಿಕ ಪಡೆಗಳು ಇರಾನ್ ಸೇನಾ ಕಮಾಂಡರ್ ಖಾಸಿಂ ಸೊಲೈಮಾನಿ  ಹತ್ಯೆ ನಡೆಸಿದ  ನಂತರ ಉದ್ಬವವಾಗಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆ  ನಿವಾರಣೆಗೆ ಶ್ರಮಿಸುವಂತೆ  ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ವಿಶ್ವ ನಾಯಕರಿಗೆ ಮನವಿ ಮಾಡಿದ್ದಾರೆ 

ವಿಶ್ವದಲ್ಲಿನ  ಪ್ರಸಕ್ತ ಉದ್ವಿಗ್ನತೆಯ ಮಟ್ಟ  ಶತಮಾನದಲ್ಲಿಯೇ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿದೆ. ನಾವು ಅಪಾಯಕಾರಿ ಕಾಲಘಟ್ಟದಲ್ಲಿ ಬದುಕುತ್ತಿದ್ದೇವೆ  ಎಂದು ಗುಟೆರಸ್  ಸೋಮವಾರ ಎಚ್ಚರಿಕೆ ನೀಡಿದ್ದಾರೆ

ಇತ್ತೀಚಿನ ಬೆಳವಣಿಗೆಗಳನ್ನು ನಿರ್ದಿಷ್ಟವಾಗಿ  ಪ್ರಸ್ತಾಪಿಸದ  ಗುಟೆರಸ್,  ಪರಮಾಣು ಪ್ರಸರಣ ನಿಗ್ರಹವನ್ನು ಸಹ ಲಘುವಾಗಿ ಪರಿಗಣಿಸುವ  ದಿನಗಳು ದೂರವಿಲ್ಲ ಎಂದು ಅವರು ಕಳವಳವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com