ನಿಕಟ ಸಂಗಾತಿ ಅಥವಾ ಕುಟುಂಬಸ್ಥರಿಂದಲೇ ಪ್ರತಿ 11 ನಿಮಿಷಕ್ಕೊಬ್ಬ ಮಹಿಳೆ ಅಥವಾ ಹುಡುಗಿಯ ಹತ್ಯೆ: ವಿಶ್ವಸಂಸ್ಥೆ ಮುಖ್ಯಸ್ಥ

ಪ್ರತಿ 11 ನಿಮಿಷಕ್ಕೆ ಒಬ್ಬ ಮಹಿಳೆ ಅಥವಾ ಹುಡುಗಿಯನ್ನು ಆತ್ಮೀಯ ಸಂಗಾತಿ ಅಥವಾ ಕುಟುಂಬದ ಸದಸ್ಯರು ಹತ್ಯೆ ಮಾಡುತ್ತಾರೆ ಎಂಬ ಆತಂಕಕಾರಿ ಅಂಕಿಅಂಶವನ್ನು ವಿಶ್ವಸಂಸ್ಥೆ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ನೀಡಿದ್ದಾರೆ.
ವಿಶ್ವಸಂಸ್ಥೆ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್
ವಿಶ್ವಸಂಸ್ಥೆ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್
Updated on

ಯುನೈಟೆಡ್ ನೇಷನ್ಸ್: ಪ್ರತಿ 11 ನಿಮಿಷಕ್ಕೆ ಒಬ್ಬ ಮಹಿಳೆ ಅಥವಾ ಹುಡುಗಿಯನ್ನು ಆತ್ಮೀಯ ಸಂಗಾತಿ ಅಥವಾ ಕುಟುಂಬದ ಸದಸ್ಯರು ಹತ್ಯೆ ಮಾಡುತ್ತಾರೆ ಎಂಬ ಆತಂಕಕಾರಿ ಅಂಕಿಅಂಶವನ್ನು ವಿಶ್ವಸಂಸ್ಥೆ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ನೀಡಿದ್ದಾರೆ.

ಮಹಿಳೆಯರು, ಯುವತಿಯರು ಅಥವಾ ಬಾಲಕಿಯರ ವಿರುದ್ಧ ಹಿಂಸಾಚಾರವು ವಿಶ್ವದ ಅತ್ಯಂತ ವ್ಯಾಪಕವಾದ "ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು, ಈ ಪಿಡುಗನ್ನು ನಿಭಾಯಿಸುವ ಕ್ರಿಯಾ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಸರ್ಕಾರಗಳಿಗೆ ಕರೆ ನೀಡಿದರು. 

ಇದೇ ನವೆಂಬರ್ 25 ರಂದು ಆಚರಿಸಲಾಗುವ 'ಮಹಿಳೆಯರ ವಿರುದ್ಧ ಹಿಂಸಾಚಾರ ನಿರ್ಮೂಲನೆ'ಗಾಗಿ ಅಂತರಾಷ್ಟ್ರೀಯ ದಿನಕ್ಕೆ ಮುನ್ನ ಪ್ರಧಾನ ಕಾರ್ಯದರ್ಶಿ ಗುಟೆರೆಸ್ ಈ ಹೇಳಿಕೆಗಳನ್ನು ನೀಡಿದ್ದಾರೆ.

ಮಹಿಳೆಯರು ಮತ್ತು ಬಾಲಕಿಯರ ಮೇಲಿನ ದೌರ್ಜನ್ಯವು ವಿಶ್ವದ ಅತ್ಯಂತ ವ್ಯಾಪಕವಾದ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಪ್ರತಿ 11 ನಿಮಿಷಗಳಿಗೊಮ್ಮೆ, ಒಬ್ಬ ಮಹಿಳೆ ಅಥವಾ ಹುಡುಗಿಯನ್ನು ನಿಕಟ ಸಂಗಾತಿ ಅಥವಾ ಕುಟುಂಬದ ಸದಸ್ಯರು ಹತ್ಯೆ ಮಾಡುತ್ತಾರೆ. COVID-19 ಸಾಂಕ್ರಾಮಿಕದಿಂದ ಆರ್ಥಿಕ ಪ್ರಕ್ಷುಬ್ಧತೆಯವರೆಗಿನ ಇತರ ಒತ್ತಡಗಳು ಅನಿವಾರ್ಯವಾಗಿ ಇನ್ನಷ್ಟು ದೈಹಿಕ ಮತ್ತು ಮೌಖಿಕ ನಿಂದನೆಗೆ ಕಾರಣವಾಗುತ್ತವೆ ಎಂದು ಹೇಳಿದರು.

ಇತ್ತೀಚಿನ ದೆಹಲಿಯ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಗುಟೆರಸ್ ಅವರ ಹೇಳಿಕೆಗಳು ಭಾರತದಲ್ಲಿ ಅದರ ಕ್ರೂರತೆಯನ್ನು ಬಿಚ್ಚಿಟ್ಟಿದೆ. ಸ್ತ್ರೀದ್ವೇಷದ ಭಾಷಣದಿಂದ ಲೈಂಗಿಕ ಕಿರುಕುಳ, ವ್ಯಕ್ತಿತ್ವ ನಿಂದನೆ ಮಹಿಳೆಯರು ಮತ್ತು ಯುವತಿಯರ ವಿರುದ್ಧ ಸೋಷಿಯಲ್ ಮೀಡಿಯಾ ಅಥವಾ ಇಂಟರ್ನೆಟ್ ಹಿಂಸಾಚಾರವನ್ನು ಎದುರಿಸುತ್ತಿದ್ದಾರೆ ಎಂದರು. 

ಈ ತಾರತಮ್ಯ, ಹಿಂಸೆ ಮತ್ತು ಮಾನವೀಯತೆಯ ದುರುಪಯೋಗವು ಜೀವನದ ಎಲ್ಲಾ ಹಂತಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಮಿತಿಗೊಳಿಸುತ್ತದೆ, ಅವರ ಮೂಲಭೂತ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ನಿರಾಕರಿಸುತ್ತದೆ. ಜಗತ್ತಿಗೆ ಅಗತ್ಯವಿರುವ ಸಮಾನ ಆರ್ಥಿಕ ಚೇತರಿಕೆ ಮತ್ತು ಸುಸ್ಥಿರ ಬೆಳವಣಿಗೆಯನ್ನು ನಿರ್ಬಂಧಿಸುತ್ತದೆ ಎಂದು ಹೇಳಿದರು. 

2026 ರ ವೇಳೆಗೆ ಮಹಿಳಾ ಹಕ್ಕುಗಳ ಸಂಘಟನೆಗಳು ಮತ್ತು ಚಳವಳಿಗಳಿಗೆ 50 ಪ್ರತಿಶತದಷ್ಟು ಹಣವನ್ನು ಹೆಚ್ಚಿಸಲು ಸರ್ಕಾರಗಳಿಗೆ ಕರೆ ನೀಡಿದ ಗುಟೆರೆಸ್, ಎಲ್ಲರೂ "ಮಹಿಳಾ ಹಕ್ಕುಗಳ ಪರವಾಗಿ ನಿಂತು ನಮ್ಮ ಧ್ವನಿಯನ್ನು ಎತ್ತುವಂತೆ" ಮತ್ತು "ನಾವೆಲ್ಲರೂ ಸ್ತ್ರೀವಾದಿಗಳು" ಎಂದು ಹೆಮ್ಮೆಯಿಂದ ಘೋಷಿಸಬೇಕೆಂದು ಒತ್ತಾಯಿಸಿದರು.

ಪಿತೃಪ್ರಭುತ್ವದ ಮಾನದಂಡಗಳನ್ನು ಪ್ರಶ್ನಿಸುವ ಮತ್ತು ಸ್ತ್ರೀದ್ವೇಷ ಮತ್ತು ಹಿಂಸೆಯನ್ನು ತಿರಸ್ಕರಿಸುವ ವಿವಿಧ ರೀತಿಯ ಪುರುಷತ್ವಗಳನ್ನು ಉತ್ತೇಜಿಸುವ ಸಾರ್ವಜನಿಕ ಅಭಿಯಾನಗಳನ್ನು ಬೆಂಬಲಿಸಬೇಕೆಂದು ಹೇಳಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com