ನಮ್ಮ ನೆರೆ ದೇಶ ಚಂದ್ರನನ್ನು ತಲುಪಿದೆ, ಆದರೆ ಪಾಕ್ ಭೂಮಿಯಿಂದ ಮೇಲೇಳುತ್ತಿಲ್ಲ: ಭಾರತವನ್ನು ಹೊಗಳಿದ ನವಾಜ್ ಷರೀಫ್

ನಮ್ಮ ನೆರೆ ದೇಶಗಳು ಚಂದ್ರನನ್ನು ತಲುಪಿವೆ. ಆದರೆ ಪಾಕಿಸ್ತಾನಕ್ಕೆ ಇನ್ನೂ ಭೂಮಿಯಿಂದ 'ಎದ್ದೇಳಲು' ಸಾಧ್ಯವಾಗಿಲ್ಲ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಮತ್ತೊಮ್ಮೆ ಭಾರತವನ್ನು ಹೊಗಳಿದ್ದಾರೆ.
ನವಾಜ್ ಷರೀಫ್
ನವಾಜ್ ಷರೀಫ್
Updated on

ಇಸ್ಲಾಮಾಬಾದ್: ನಮ್ಮ ನೆರೆ ದೇಶಗಳು ಚಂದ್ರನನ್ನು ತಲುಪಿವೆ. ಆದರೆ ಪಾಕಿಸ್ತಾನಕ್ಕೆ ಇನ್ನೂ ಭೂಮಿಯಿಂದ 'ಎದ್ದೇಳಲು' ಸಾಧ್ಯವಾಗಿಲ್ಲ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಮತ್ತೊಮ್ಮೆ ಭಾರತವನ್ನು ಹೊಗಳಿದ್ದಾರೆ.

ಇಸ್ಲಾಮಾಬಾದ್‌ನಲ್ಲಿ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಕೇಡರ್ ಅನ್ನು ಉದ್ದೇಶಿಸಿ ಮಾತನಾಡಿದ ಷರೀಫ್, ದೇಶದ ಭೀಕರ ಆರ್ಥಿಕ ಸ್ಥಿತಿಯನ್ನು ಸೂಚಿಸಿದ ಪಿಎಂಎಲ್-ಎನ್ ಮುಖ್ಯಸ್ಥರು, ಅದರ ಅವನತಿಗೆ ಪಾಕಿಸ್ತಾನವೇ ಕಾರಣ ಎಂದು ಹೇಳಿದರು.

ನಮ್ಮ ನೆರೆಹೊರೆಯವರು ಚಂದ್ರನನ್ನು ತಲುಪಿದ್ದಾರೆ. ಆದರೆ ನಾವು ಇನ್ನೂ ನೆಲದಿಂದ ಮೇಲೇರಲು ಸಹ ಸಾಧ್ಯವಾಗಿಲ್ಲ. ಇದು ಹೀಗೆ ಮುಂದುವರೆಯಲು ಸಾಧ್ಯವಿಲ್ಲ ಎಂದು ಹೇಳಿದರು. ನಮ್ಮ ಅವನತಿಗೆ ನಾವೇ ಕಾರಣ, ಇಲ್ಲದಿದ್ದರೆ ಈ ದೇಶ ಬೇರೆಯದೇ ಸ್ಥಿತಿಗೆ ತಲುಪುತ್ತಿತ್ತು ಎಂದರು.

ನಾಲ್ಕನೇ ಬಾರಿಗೆ ಪಾಕಿಸ್ತಾನದ ಪ್ರಧಾನಿ ಹುದ್ದೆಗೆ ಸ್ಪರ್ಧಿಸುತ್ತಿರುವ ನವಾಜ್ ಷರೀಫ್ ಇಂದು ತಮ್ಮ ಭಾಷಣದಲ್ಲಿ, 2013ರಲ್ಲಿ ನಾವು ಭಾರಿ ವಿದ್ಯುತ್ ಕಡಿತವನ್ನು ಎದುರಿಸಿದ್ದೇವು. ನಾನು ಬಂದು ಅದನ್ನು ಕೊನೆಗೊಳಿಸಿದ್ದೇ, ಇಡೀ ದೇಶದಿಂದ ಭಯೋತ್ಪಾದನೆಯನ್ನು ಕೊನೆಗೊಳಿಸಿದ್ದೇ, ಕರಾಚಿಯಲ್ಲಿ ಶಾಂತಿಯನ್ನು ಪುನಃಸ್ಥಾಪಿಸಿದ್ದೇವು, ಹೆದ್ದಾರಿಗಳನ್ನು ನಿರ್ಮಿಸಿದ್ದೇವು, CPEC ಬಂದಿತ್ತು. ಅಭಿವೃದ್ಧಿ ಮತ್ತು ಸಮೃದ್ಧಿಯ ಹೊಸ ಯುಗ ಪ್ರಾರಂಭವಾಯಿತು.

ನವಾಜ್ ಷರೀಫ್ ಅವರು 1993, 1999 ಮತ್ತು 2017ರಲ್ಲಿ ಮೂರು ಬಾರಿ ಅಧಿಕಾರದಿಂದ ಹೊರಹಾಕಲ್ಪಟ್ಟರು. ಸದ್ಯ ಪಾಕಿಸ್ತಾನದಲ್ಲಿ ಉಂಟಾಗಿರುವ ಬಿಕ್ಕಟ್ಟಿಗೆ ಈಗ ಯಾರನ್ನು ಹೊಣೆ ಮಾಡಬೇಕು. ನಾವೇ ಕಾಲಿಗೆ ಗುಂಡು ಹಾರಿಸಿಕೊಂಡಿದ್ದೇವೆ. 2014ರಲ್ಲಿ ಅವರ ಸರ್ಕಾರದ ಅವಧಿಯಲ್ಲಿ ಹಣದುಬ್ಬರ ಕಡಿಮೆಯಾಗಿತ್ತು. ಇಸ್ಲಾಮಾಬಾದ್‌ನ ಅಬ್ಬಾರದಲ್ಲಿ ಎರಡು ಪಾಕಿಸ್ತಾನಿ ರೂಪಾಯಿಗಳಿಗೆ ಒಂದು ರೊಟ್ಟಿ ಲಭ್ಯವಿತ್ತು. ಅದು ಈಗ 30 ಪಾಕಿಸ್ತಾನಿ ರೂಪಾಯಿಗೆ ತಲುಪಿದೆ ಎಂದು ನವಾಜ್ ಷರೀಫ್ ಹೇಳಿದರು.

ಮರ್ಯಮ್ ಮತ್ತು ಇತರ ಪಿಎಂಎಲ್-ಎನ್ ನಾಯಕರ ವಿರುದ್ಧ 'ನಕಲಿ ಪ್ರಕರಣಗಳು' ದಾಖಲಾಗಿವೆ ಎಂದು ಷರೀಫ್ ಹೇಳಿದ್ದಾರೆ. ಇಸ್ಲಾಮಾಬಾದ್ ಹೈಕೋರ್ಟ್ ಕೇವಲ ಮೂರು ವಿಚಾರಣೆಗಳಲ್ಲಿ ಎರಡು ಪ್ರಕರಣಗಳಲ್ಲಿ ಶಿಕ್ಷೆಯನ್ನು ರದ್ದುಗೊಳಿಸಿದೆ.

ದೇಶ ಅಭಿವೃದ್ಧಿಯಾಗಬೇಕಾದರೆ ಮಹಿಳೆಯರ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಪಾಕಿಸ್ತಾನದ ಜನತೆಗೆ ನವಾಜ್ ಷರೀಫ್ ಕರೆ ನೀಡಿದ್ದಾರೆ. ಅಭಿವೃದ್ಧಿ ಹೊಂದಿದ ಪ್ರತಿಯೊಂದು ದೇಶವು ಅಭಿವೃದ್ಧಿಯಲ್ಲಿ ಮಹಿಳೆಯರಿಗೆ ಆದ್ಯತೆ ನೀಡಿದೆ. ಅದು ಮಹಿಳೆಯರನ್ನು ಅಭಿವೃದ್ಧಿಗೆ ಮುಂದಕ್ಕೆ ತಂದಿದೆ. ಅಭಿವೃದ್ಧಿಯಲ್ಲಿ ಮಹಿಳೆಯರು ಸಮಾನ ಪಾಲುದಾರರಾಗಬೇಕು ಎಂದು ನಾನು ಭಾವಿಸುತ್ತೇನೆ. ಪುರುಷರೊಂದಿಗೆ ಮಹಿಳೆಗೆ ಸಮಾನ ಹಕ್ಕುಗಳನ್ನು ನೀಡಬೇಕು. ನಾವು ಮಾಡಬೇಕು. ಮುಂದುವರಿಯಿರಿ ಮತ್ತು ಈ ದೇಶಕ್ಕೆ ಸೇವೆ ಸಲ್ಲಿಸಿ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com