ಬಾಂಗ್ಲಾ ದಂಗೆ ಹಿಂದೆ ಅಮೆರಿಕಾ: ಢಾಕಾ ರಾಜಕೀಯ ವಿಶ್ಲೇಷಕರು

ಮಾಜಿ ಪ್ರಧಾನಿ ಶೇಖ್ ಹಸೀನಾ ಸರ್ಕಾರ ಪತನಕ್ಕೆ ಕಾರಣವಾದ ವಿದ್ಯಾರ್ಥಿಗಳ ಪ್ರತಿಭಟನೆಗೆ ಅಮೆರಿಕ ನೆರವು ನೀಡಿದೆ ಎಂದು ಬಾಂಗ್ಲಾದೇಶದ ರಾಜಕೀಯ ವಿಶ್ಲೇಷಕರು ಆರೋಪಿಸಿದ್ದಾರೆ.
ಬಾಂಗ್ಲಾದೇಶ ಸಂಸತ್
ಬಾಂಗ್ಲಾದೇಶ ಸಂಸತ್TNIE
Updated on

ನವದೆಹಲಿ: ಮಾಜಿ ಪ್ರಧಾನಿ ಶೇಖ್ ಹಸೀನಾ ಸರ್ಕಾರ ಪತನಕ್ಕೆ ಕಾರಣವಾದ ವಿದ್ಯಾರ್ಥಿಗಳ ಪ್ರತಿಭಟನೆಗೆ ಅಮೆರಿಕ ನೆರವು ನೀಡಿದೆ ಎಂದು ಬಾಂಗ್ಲಾದೇಶದ ರಾಜಕೀಯ ವಿಶ್ಲೇಷಕರು ಆರೋಪಿಸಿದ್ದಾರೆ.

ಬಾಂಗ್ಲಾದೇಶದಲ್ಲಿ ಕಳೆದ ಕೆಲವು ವಾರಗಳಲ್ಲಿ ಏನಾಯಿತು ಎಂಬುದನ್ನು ದೀರ್ಘಕಾಲದಿಂದ ಆಡಳಿತ ಬದಲಾವಣೆಯ ಮೇಲೆ ಕಣ್ಣಿಟ್ಟಿದ್ದ ಅಮೆರಿಕಾದ ಸಹಾಯದಿಂದ ಯೋಜಿಸಲಾಗಿದ್ದು ಅದನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲಾಗಿದೆ. ಇದನ್ನು ನಾವು 'ಬಾಂಗ್ಲಾ ಸ್ಪ್ರಿಂಗ್' ಎಂದು ಉಲ್ಲೇಖಿಸುತ್ತೇವೆ. ಬಾಂಗ್ಲಾದಲ್ಲಿ ವಿದ್ಯಾರ್ಥಿಗಳನ್ನು ಮೂಲಭೂತವಾದಿ ಸಮುದಾಯಗಳಿಗೆ ಪರಿಚಯಿಸಲಾಯಿತು. ಸ್ಟಡಿ ಸರ್ಕಲ್‌ಗಳ ಮೂಲಕ ಆಡಳಿತ ಬದಲಾವಣೆಯ ಕುರಿತು ತರಬೇತಿ ನೀಡಲಾಯಿತು ಎಂದು ರಾಜಕೀಯ ವ್ಯಾಖ್ಯಾನಕಾರ ಪ್ರೊಫೆಸರ್ ನಜ್ಮುಲ್ ಅಹ್ಸಾನ್ ಕಲೀಮುಲ್ಲಾ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದು ಇದರಲ್ಲಿ ಭಾರತವು ತಿಳಿಯದೆ ಸಿಕ್ಕಿಬಿದ್ದಿದೆ ಎಂದು ಹೇಳಿದರು.

ಅಮೆರಿಕ ನಿರಂತರವಾಗಿ ಮಾನವ ಹಕ್ಕುಗಳ ಸಮಸ್ಯೆಗಳನ್ನು ಎತ್ತಿ ತೋರಿಸುತ್ತಿದೆ. ವೀಸಾ ನಿರ್ಬಂಧಗಳನ್ನು ಹೇರಿದ್ದು ಕಳೆದ ಎರಡು ವರ್ಷಗಳಲ್ಲಿ ಬಾಂಗ್ಲಾದೇಶಕ್ಕೆ ಅನೇಕ ಉನ್ನತ ಮಟ್ಟದ ಅಧಿಕಾರಿಗಳನ್ನು ಕಳುಹಿಸಿತ್ತು ಎಂದು ತಿಳಿಸಿದರು.

"ಜಾಗತಿಕ ಆಡಳಿತ ಬದಲಾವಣೆ ಪರಿಣತರೆಂದೇ ಹೆಸರಾಗಿರುವ ಅಮೆರಿಕದ ರಾಜತಾಂತ್ರಿಕ ಡೊನಾಲ್ಡ್ ಲು ಅವರು ಬಾಂಗ್ಲಾದೇಶಕ್ಕೆ ಹಲವಾರು ಬಾರಿ ಭೇಟಿ ನೀಡಿ ಆಡಳಿತ ಮತ್ತು ವಿರೋಧ ಪಕ್ಷಗಳನ್ನು ಭೇಟಿ ಮಾಡಿದರು. ತಮ್ಮ ಕೊನೆಯ ಭೇಟಿಯಲ್ಲಿ ವಿದ್ಯಾರ್ಥಿ ಮತ್ತು ಯುವ ಕಾರ್ಯಕರ್ತರನ್ನು ಭೇಟಿಯಾಗಿ ಬಾಂಗ್ಲಾದೇಶದಲ್ಲಿ ಕ್ರಾಂತಿಯ ಬೀಜ ಬಿತ್ತಿದ್ದರು ಎಂದು ಬಾಂಗ್ಲಾದೇಶದ ಶಿಕ್ಷಣತಜ್ಞರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

ಬಾಂಗ್ಲಾದೇಶ ಸಂಸತ್
ಬಾಂಗ್ಲಾದಲ್ಲಿ ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಅಸ್ತಿತ್ವಕ್ಕೆ; ಶುಭಕೋರಿದ ಪ್ರಧಾನಿ ಮೋದಿ

ಡೊನಾಲ್ಡ್ ಲು ಹೆಚ್ಚಾಗಿ ಅವಾಮಿ ಲೀಗ್ ಅನ್ನು ಅವಲಂಬಿಸಿರುವುದರಿಂದ ಭಾರತಕ್ಕೆ ಇದು ತಿಳಿಯಲಿಲ್ಲ. ISI ಕೂಡ ಸಾಕಷ್ಟು ಸಕ್ರಿಯವಾಗಿದ್ದು ಭಾರತದ ವಿರುದ್ಧ ಪ್ರಾಕ್ಸಿ ಯುದ್ಧವನ್ನು ನಡೆಸುತ್ತಿದೆ. ಜೊತೆಗೆ, ಹಿಜ್ಬ್-ಉತ್-ತಹ್ರೀರ್ ಸಮವಸ್ತ್ರದಲ್ಲಿರುವ ಪುರುಷರ ಮೇಲೆ ಬಲವಾದ ಪ್ರಭಾವವನ್ನು ಹೊಂದಿದೆ. ಸೇನಾ ಮುಖ್ಯಸ್ಥರು ಸರ್ಕಾರದ ಬದಲಾವಣೆಯ ಬಗ್ಗೆ ಮಾತನಾಡುವಾಗ, ಅವರ ಮೊದಲ ಉಲ್ಲೇಖವು ಮೂಲಭೂತ ಸಂಘಟನೆಯ ಬಗ್ಗೆ ಎಂದು ಪ್ರೊಫೆಸರ್ ಕಲೀಮುಲ್ಲಾ ಸೇರಿಸಲಾಗಿದೆ.

ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಬಹುತೇಕ ಎಲ್ಲಾ ಸದಸ್ಯರು ಅಮೆರಿಕ ಜೊತೆ ನೇರ ಸಂಪರ್ಕವನ್ನು ಹೊಂದಿದ್ದಾರೆ. ಸರ್ಕಾರದ ಭಾಗವಾಗಲು ಆಹ್ವಾನಿಸಲ್ಪಟ್ಟ ಏಕೈಕ ಹಿಂದೂ ಡಾ. ಬಿಧನ್ ರಂಜನ್ ರಾಯ್ ಅವರು ಗುರುವಾರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಲಿಲ್ಲ. ಅಲ್ಲದೆ ಅವರು ಸೇರುತ್ತಾರೆಯೇ ಎಂಬ ಮಾಹಿತಿ ಇಲ್ಲ ಎಂದರು.

ಏತನ್ಮಧ್ಯೆ, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ಬಗ್ಗೆ ಪ್ರತಿಭಟನೆಗಳು ಮುಂದುವರೆದಿವೆ. ಆದರೆ ಚಿತ್ತಗಾಂಗ್‌ನ ಜೈಲಿನಲ್ಲಿ ಎಂಟು ಜನರು ಸಾವನ್ನಪ್ಪಿದ ಕುರಿತು ವರದಿಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com