ಜಪಾನಿನಲ್ಲಿ ಭೂಕಂಪ, ಸುನಾಮಿ ಎಚ್ಚರಿಕೆ: ಮಾಹಿತಿ ಬಯಸುವವರಿಗೆ ನೆರವಾಗಲು ನಿಯಂತ್ರಣ ಕೊಠಡಿ ಸ್ಥಾಪಿಸಿದ ಭಾರತ

ಪ್ರಬಲ ಭೂಕಂಪಗಳ ಸರಣಿಯಿಂದ ತತ್ತರಿಸಿರುವ ಜಪಾನ್ ಸೋಮವಾರ ಸುನಾಮಿ ಎಚ್ಚರಿಕೆ ನೀಡಿದೆ. ರಿಕ್ಟರ್ ಮಾಪಕದಲ್ಲಿ 7.6 ರ ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಹೇಳಲಾಗಿದೆ.
ವಾಜಿಮಾದಲ್ಲಿ ನೆಲದಲ್ಲಿ ಬಿರುಕು ಕಾಣಿಸಿಕೊಂಡಿರುವ ಚಿತ್ರ
ವಾಜಿಮಾದಲ್ಲಿ ನೆಲದಲ್ಲಿ ಬಿರುಕು ಕಾಣಿಸಿಕೊಂಡಿರುವ ಚಿತ್ರ

ನವದೆಹಲಿ: ಪ್ರಬಲ ಭೂಕಂಪಗಳ ಸರಣಿಯಿಂದ ತತ್ತರಿಸಿರುವ ಜಪಾನ್ ಸೋಮವಾರ ಸುನಾಮಿ ಎಚ್ಚರಿಕೆ ನೀಡಿದೆ. ರಿಕ್ಟರ್ ಮಾಪಕದಲ್ಲಿ 7.6 ರ ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಹೇಳಲಾಗಿದೆ. ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಟೋಕಿಯೊದಲ್ಲಿನ ಭಾರತೀಯ ರಾಯಭಾರ ಕಚೇರಿಯು ಭೂಕಂಪ ಮತ್ತು ಸುನಾಮಿಯ ಅಪಾಯದ ಬಗ್ಗೆ ಮಾಹಿತಿ ನೀಡಲು ತುರ್ತು ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ.

ಜಪಾನ್‌ನಲ್ಲಿ 46,260ಕ್ಕೂ ಹೆಚ್ಚು ಭಾರತೀಯರು ವಾಸಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಸ್ವದೇಶಕ್ಕೆ ಮರಳಲು ಬಯಸುವ ಭಾರತದ ಕುಟುಂಬಗಳು ಅಥವಾ ಜಪಾನ್‌ನಲ್ಲಿ ಸಹಾಯವನ್ನು ಬಯಸುವವರು ಸಹ ನಿಯಂತ್ರಣ ಕೊಠಡಿಯನ್ನು ಸಂಪರ್ಕಿ ಸಬಹುದು. ಸ್ಥಳಾಂತರ ಆದೇಶಗಳನ್ನು ನಿಕಟವಾಗಿ ಅನುಸರಿಸುವಂತೆ ಜಪಾನ್‌ನ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರು ಜನರನ್ನು ಕೇಳಿಕೊಂಡಿದ್ದಾರೆ.

ಭೂಕಂಪವು ಸಮುದ್ರದಲ್ಲಿ ಉಬ್ಬರವಿಳಿತಕ್ಕೆ ಕಾರಣವಾಗಿದ್ದು, ಕೆಲವು ಜಪಾನ್‌ನ ಸಮುದ್ರದುದ್ದಕ್ಕೂ ಸುಮಾರು ಒಂದು ಮೀಟರ್ ಎತ್ತರದಲ್ಲಿವೆ ಎಂದು ವರದಿಗಳು ತಿಳಿಸಿವೆ. ಈ ಅಲೆಗಳು 3 ಮೀಟರ್ ಎತ್ತರದವರೆಗೆ (10 ಅಡಿಗಿಂತ ಸ್ವಲ್ಪ ಕಡಿಮೆ) ಏರಬಹುದು ಎಂದು ಸುನಾಮಿ ಎಚ್ಚರಿಕೆಯಲ್ಲಿ ಹೇಳಲಾಗಿದೆ. 

ಜಪಾನ್ ನ ಹವಾಮಾನ ಏಜೆನ್ಸಿ ಇಶಿಕಾವಾ, ನಿಗಾಟಾ ಮತ್ತು ಟೊಯಾಮಾ ಸುತ್ತಮುತ್ತಲಿನ ಕರಾವಳಿ ಪ್ರದೇಶಗಳಿಗೆ ಸುನಾಮಿ ಎಚ್ಚರಿಕೆ ನೀಡಿದೆ. ಈಶಾನ್ಯ ಜಪಾನ್‌ನ ಕೆಲವು ಭಾಗಗಳಲ್ಲಿ ಮಾರ್ಚ್ 2011 ರ ಭೂಕಂಪ ಮತ್ತು ಸುನಾಮಿಯ ನಂತರ ಕಂಡುಬಂದ ಮೊದಲ ಎಚ್ಚರಿಕೆಯಾಗಿದೆ. ಭೂಕಂಪದ ಪರಿಣಾಮ ಪ್ರದೇಶಗಳಲ್ಲಿ ಕೆಲವು ಮನೆಗಳಿಗೆ ಹಾನಿಯಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com