ಇಸ್ರೇಲ್ ಗಾಜಾ ತೊರೆಯುವವರೆಗೆ ಒತ್ತೆಯಾಳುಗಳ ಬಿಡುಗಡೆ ಇಲ್ಲ; ಯಾಹ್ಯಾ ಸಿನ್ವರ್ ಹತ್ಯೆ ದೃಢಪಡಿಸಿದ ಹಮಾಸ್

ಕದನ ವಿರಾಮಕ್ಕೆ ಆಗ್ರಹಿಸಿರುವ ಹಮಾಸ್, ಗಾಜಾದಿಂದ ಇಸ್ರೇಲಿ ಪಡೆಗಳು ಹೊರನಡೆಯಬೇಕು ಎಂದು ಹೇಳಿದೆ.
Yahya Sinwar
ಯಾಹ್ಯಾ ಸಿನ್ವಾರ್‌Associated Press
Updated on

ತನ್ನ ನಾಯಕ ಯಾಹ್ಯಾ ಸಿನ್ವರ್ ಇಸ್ರೇಲ್ ದಾಳಿಯಲ್ಲಿ ಸಾವನ್ನಪ್ಪಿರುವುದನ್ನು ಹಮಾಸ್ ದೃಢಪಡಿಸಿದೆ. ಇದೇ ವೇಳೆ ಇಸ್ರೇಲ್ ಗಾಜಾವನ್ನು ತೊರೆಯುವವರೆಗೂ ಯಾವುದೇ ಒತ್ತಾಳುಗಳನ್ನೂ ಬಿಡುಗಡೆ ಮಾಡುವುದಿಲ್ಲ ಎಂದು ಹಮಾಸ್ ಹೇಳಿದೆ.

ಕದನ ವಿರಾಮಕ್ಕೆ ಆಗ್ರಹಿಸಿರುವ ಹಮಾಸ್, ಗಾಜಾದಿಂದ ಇಸ್ರೇಲಿ ಪಡೆಗಳು ಹೊರನಡೆಯಬೇಕು ಎಂದು ಹೇಳಿದೆ.

ಕದನ ವಿರಾಮ ಮಾತುಕತೆಯ ಸಂದರ್ಭದಲ್ಲಿ ಸಿನ್ವಾರ್‌ನ ಉಪ ಮತ್ತು ಹಮಾಸ್ ನಿಯೋಗದ ನಾಯಕ ಖಲೀಲ್ ಅಲ್-ಹಯಾ, ಆಕ್ರಮಣದ ಅಂತ್ಯದ ಮೊದಲು ಕೈದಿಗಳ ವಾಪಸಾತಿ ಸಂಭವಿಸುವುದಿಲ್ಲ ಎಂದು ಒತ್ತಿಹೇಳಿದ್ದಾರೆ ಎಂದು ಎಪಿ ವರದಿ ಮಾಡಿದೆ.

ಹಮಾಸ್ ತನ್ನ ಹೇಳಿಕೆಯಲ್ಲಿ ಸಿನ್ವಾರ್ ಅವರನ್ನು ವೀರ ಹುತಾತ್ಮ ಎಂದು ಶ್ಲಾಘಿಸಿದೆ.

Yahya Sinwar
'ನಾಳೆಯೇ ಯುದ್ಧ ಕೊನೆಗೊಳಿಸುತ್ತೇವೆ.. ಆದರೆ'; Hamas ಮುಖ್ಯಸ್ಥ Yahya Sinwar ಹತ್ಯೆ ಬೆನ್ನಲ್ಲೇ ಇಸ್ರೇಲ್ ಪ್ರಧಾನಿ Netanyahu ಎಚ್ಚರಿಕೆ!

ಸಿನ್ವಾರ್‌ನ ಸಾವು, ಮುಂಚೂಣಿಯ ಎನ್‌ಕೌಂಟರ್‌ನಂತೆ ಕಂಡುಬಂದಿದೆ, ಇದು ಗಾಜಾ ಯುದ್ಧದ ದಿಕ್ಕನ್ನು ಬದಲಾಯಿಸಬಹುದಾದ ಮಹತ್ವದ ಘಟನೆಯಾಗಿದೆ. ಇಸ್ರೇಲ್ ಬಹಳ ಹಿಂದಿನಿಂದಲೂ ಸಿನ್ವರ್ ಹತ್ಯೆಯನ್ನು ಆದ್ಯತೆಯಾಗಿ ಪರಿಗಣಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com