Quad summit: ಬಾಂಗ್ಲಾದೇಶ ಪರಿಸ್ಥಿತಿ, ಉಕ್ರೇನ್ ಗಾಜಾ ಸಂಘರ್ಷಗಳ ಬಗ್ಗೆ ನಾಯಕರು ಚರ್ಚೆ- ವಿದೇಶಾಂಗ ಕಾರ್ಯದರ್ಶಿ ಮಿಸ್ರಿ

ಈ ಸಂದರ್ಭದಲ್ಲಿ ಬಾಂಗ್ಲಾದೇಶದ ಪರಿಸ್ಥಿತಿ ಚರ್ಚೆಗೆ ಬಂದಿತು ಮತ್ತು ಪರಿಸ್ಥಿತಿಯ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು ಎಂದು ತಿಳಿಸಿದರು.
Quad summit: ಬಾಂಗ್ಲಾದೇಶ ಪರಿಸ್ಥಿತಿ, ಉಕ್ರೇನ್ ಗಾಜಾ ಸಂಘರ್ಷಗಳ ಬಗ್ಗೆ ನಾಯಕರು ಚರ್ಚೆ- ವಿದೇಶಾಂಗ ಕಾರ್ಯದರ್ಶಿ ಮಿಸ್ರಿ
Updated on

ನ್ಯೂಯಾರ್ಕ್: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಮೇರಿಕಾ ಭೇಟಿಯ ಸಂದರ್ಭದಲ್ಲಿ Quad summit ಯಲ್ಲಿ ನೆರೆಯ ಬಾಂಗ್ಲಾದೇಶದ ಪ್ರಸ್ತುತ ಪರಿಸ್ಥಿತಿಯು ಚರ್ಚೆಯ ಪ್ರಮುಖ ವಿಷಯವಾಗಿತ್ತು ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಹೇಳಿದ್ದಾರೆ. ಪರಿಸ್ಥಿತಿ ಕುರಿತು ಅಭಿಪ್ರಾಯ ವಿನಿಮಯವಾಗಿದೆ ಎಂದು ಅವರು ಹೇಳಿದರು.

ಕ್ವಾಡ್ ನಾಯಕರೊಂದಿಗಿನ ಸಭೆಯಲ್ಲಿ ಪ್ರಧಾನಿ ಮೋದಿ ಅವರು, ಜಾಗತಿಕ ಬೆಳವಣಿಗೆ, ಅಭಿವೃದ್ಧಿ, ಶಾಂತಿ ಮತ್ತು ಭದ್ರತೆಗಾಗಿ ಭಾರತದ ಅಭಿಪ್ರಾಯಗಳು ಮತ್ತು ಬದ್ಧತೆಗಳನ್ನು ಮುಂದಿಟ್ಟರು ಎಂದು ಮಿಸ್ರಿ ಹೇಳಿದರು.

ಸಭೆಯ ನಂತರ ಹೊಡಿಸಲಾದ ಜಂಟಿ ವಿಲ್ಮಿಂಗ್ಟನ್ ಘೋಷಣೆಯಲ್ಲಿ ಕ್ವಾಡ್ ಅನ್ನು ಒಳ್ಳೆಯದಕ್ಕೆ ಶಕ್ತಿ ಎಂದು ಕರೆದಿದೆ ಮತ್ತು ಹಿಂದೆಂದಿಗಿಂತಲೂ ಹೆಚ್ಚು ಕಾರ್ಯತಂತ್ರವಾಗಿ ಜೋಡಿಸಲ್ಪಟ್ಟಿದೆ. ಕ್ವಾಡ್ ಯಾರ ವಿರುದ್ಧವೂ ಅಲ್ಲ, ಆದರೆ ನಿಯಮಾಧಾರಿತ ಅಂತಾರಾಷ್ಟ್ರೀಯ ಆದೇಶ ಮತ್ತು ಸಾರ್ವಭೌಮತ್ವದ ಗೌರವಕ್ಕಾಗಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುವ ಮೂಲಕ ಚೀನಾದ ಜೊತೆಗಿನ ಮುಸುಕಿನ ಗುದ್ದಾಟವನ್ನು ಟೀಕಿಸಿದರು.

ನ್ಯೂಯಾರ್ಕ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಿಸ್ರಿ, ಈ ಸಂದರ್ಭದಲ್ಲಿ ಬಾಂಗ್ಲಾದೇಶದ ಪರಿಸ್ಥಿತಿ ಚರ್ಚೆಗೆ ಬಂದಿತು ಮತ್ತು ಪರಿಸ್ಥಿತಿಯ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು ಎಂದು ತಿಳಿಸಿದರು.

ಬಾಂಗ್ಲಾದೇಶ ಹಲವಾರು ಹಿಂಸಾಚಾರ ಮತ್ತು ಅವ್ಯವಸ್ಥೆಯ ಘಟನೆಗಳಿಗೆ ಸಾಕ್ಷಿಯಾಗಿದೆ, ಅಂತಿಮವಾಗಿ ವಿದ್ಯಾರ್ಥಿಗಳ ಪ್ರತಿಭಟನೆಗಳು ಬೃಹತ್ ಸರ್ಕಾರಿ ವಿರೋಧಿ ಆಂದೋಲನವಾಗಿ ಮಾರ್ಪಟ್ಟ ನಂತರ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಹೊರಹಾಕಲು ಕಾರಣವಾಯಿತು.

ಈ ಮಧ್ಯೆ ರಷ್ಯಾ-ಉಕ್ರೇನ್ ಸಂಘರ್ಷಕ್ಕೆ ಸಂಬಂಧಿಸಿದ ಶಾಂತಿ ಪ್ರಸ್ತಾಪದ ಬಗ್ಗೆಯೂ ಮಾತನಾಡಿದ ಮಿಸ್ರಿ ಮತ್ತು ಈ ಸಂಭಾಷಣೆಗಳಲ್ಲಿ ತೊಡಗಿಸಿಕೊಂಡಿರುವ ಭಾರತದ ಮೌಲ್ಯವನ್ನು ಜನರು ಗುರುತಿಸುತ್ತಾರೆ ಎಂದು ಪ್ರತಿಪಾದಿಸಿದರು.

Quad summit: ಬಾಂಗ್ಲಾದೇಶ ಪರಿಸ್ಥಿತಿ, ಉಕ್ರೇನ್ ಗಾಜಾ ಸಂಘರ್ಷಗಳ ಬಗ್ಗೆ ನಾಯಕರು ಚರ್ಚೆ- ವಿದೇಶಾಂಗ ಕಾರ್ಯದರ್ಶಿ ಮಿಸ್ರಿ
Quad summit: ನಾವು ಯಾರ ವಿರುದ್ಧವೂ ಅಲ್ಲ- ಪ್ರಧಾನಿ ಮೋದಿ; ಚೀನಾ ನಮ್ಮನ್ನು ಪರೀಕ್ಷಿಸುತ್ತಿದೆ ಎಂದ ಅಮೆರಿಕ ಅಧ್ಯಕ್ಷ ಬೈಡನ್!

ರಷ್ಯಾ-ಉಕ್ರೇನ್ ಸಂಘರ್ಷಕ್ಕೆ ಸಂಬಂಧಿಸಿದ ಶಾಂತಿ ಪ್ರಸ್ತಾಪಕ್ಕೆ ಎಲ್ಲಾ ಕಡೆ ನಡೆಯುತ್ತಿರುವ ಮಾತುಕತೆಗಳಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ಹೇಳಲು ಬಯಸುತ್ತೇವೆ ಎಂದರು.

"ಜನರು ಈ ಮಾತುಕತೆಗಳಲ್ಲಿ ಭಾರತದ ಮೌಲ್ಯವನ್ನು ನೋಡುತ್ತಾರೆ. ಹಲವು ಜನರೊಂದಿಗೆ ಮಾತನಾಡಲು ಸಮರ್ಥರಾಗಿದ್ದೇವೆ ಮತ್ತು ಪ್ರಸ್ತುತ ಸ್ಥಿತಿಯಲ್ಲಿ ಇದು ಸ್ವಲ್ಪ ಫಲಿತಾಂಶವನ್ನು ನೀಡುವುದಿಲ್ಲ ಏಕೆಂದರೆ ಇನ್ನೂ ಸ್ವಲ್ಪ ಕೆಲಸ ಉಳಿದಿದೆ. ಈ ಸಮಯದಲ್ಲಿ ಸಂಘರ್ಷ ಕುರಿತು ಎಲ್ಲಾ ಕಡೆಗಳಲ್ಲಿ ಹಲವು ಜನರೊಂದಿಗೆ ನಡೆಯುತ್ತಿರುವ ಮಾತುಕತೆ ಪ್ರಮುಖವಾಗಿದೆ ಎಂದು ಮಿಶ್ರಿ ಹೇಳಿದರು.

ಆಗಸ್ಟ್ 23 ರಂದುಉಕ್ರೇನ್‌ಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸಲು ಉಕ್ರೇನ್ ಮತ್ತು ರಷ್ಯಾ ಎರಡೂ ಸಮಯ ವ್ಯರ್ಥ ಮಾಡದೆ ಒಟ್ಟಿಗೆ ಕುಳಿತು ಮಾತನಾಡಬೇಕು. ಈ ಪ್ರದೇಶದಲ್ಲಿ ಶಾಂತಿ ಪುನಃಸ್ಥಾಪಿಸಲು ಸಕ್ರಿಯ ಪಾತ್ರ ವಹಿಸಲು ಭಾರತ ಸಿದ್ಧವಾಗಿದೆ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್‌ಕಿ ಅವರಿಗೆ ತಿಳಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com