Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ಪತ್ರಕರ್ತರು, ವೈದ್ಯಕೀಯ ಸಿಬ್ಬಂದಿ ಮತ್ತು ಎಲ್ಲಾ ನಾಗರಿಕರನ್ನು ಇಸ್ರೇಲ್ ಗೌರವಿಸುತ್ತದೆ. ನಮ್ಮ ಯುದ್ಧ ಹಮಾಸ್ ಭಯೋತ್ಪಾದಕರ ವಿರುದ್ಧವಾಗಿದ್ದು, ಹಮಾಸ್ ಅನ್ನು ಸೋಲಿಸುವುದು ಮತ್ತು ನಮ್ಮ ಒತ್ತೆಯಾಳುಗಳನ್ನು ತಾಯಿನಾಡಿಗೆ ಕರೆತರುವುದು ನಮ್ಮ ಗುರಿಯಾಗಿದೆ.
Israeli Prime Minister Benjamin Netanyahu
ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು
Updated on

ಇಸ್ರೇಲ್: ದಕ್ಷಿಣ ಗಾಜಾದ ಮುಖ್ಯ ಆಸ್ಪತ್ರೆ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಐವರು ಪತ್ರಕರ್ತರು ಸೇರಿ 21 ಮಂದಿ ಸಾವು ಸಾವಿಗೀಡಾಗಿದ್ದು, ದಾಳಿ ಕುರಿತು ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರು ಇದೇ ಮೊದಲ ಬಾರಿಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಹೇಳಿಕೆ ನೀಡಿರುವ ಅವರು, ಗಾಜಾದ ನಾಸರ್ ಆಸ್ಪತ್ರೆಯಲ್ಲಿ ಇಂದು ಸಂಭವಿಸಿದ ದುರಂತಕ್ಕೆ ಇಸ್ರೇಲ್ ತೀವ್ರ ವಿಷಾದ ವ್ಯಕ್ತಪಡಿಸುತ್ತದೆ ಎಂದು ಹೇಳಿದ್ದಾರೆ.

"ಪತ್ರಕರ್ತರು, ವೈದ್ಯಕೀಯ ಸಿಬ್ಬಂದಿ ಮತ್ತು ಎಲ್ಲಾ ನಾಗರಿಕರನ್ನು ಇಸ್ರೇಲ್ ಗೌರವಿಸುತ್ತದೆ. ನಮ್ಮ ಯುದ್ಧ ಹಮಾಸ್ ಭಯೋತ್ಪಾದಕರ ವಿರುದ್ಧವಾಗಿದ್ದು, ಹಮಾಸ್ ಅನ್ನು ಸೋಲಿಸುವುದು ಮತ್ತು ನಮ್ಮ ಒತ್ತೆಯಾಳುಗಳನ್ನು ತಾಯಿನಾಡಿಗೆ ಕರೆತರುವುದು ನಮ್ಮ ಗುರಿಯಾಗಿದೆ ಎಂದು ತಿಳಿಸಿದ್ದಾರೆ.

ದಕ್ಷಿಣ ಗಾಜಾದ ಮುಖ್ಯ ಆಸ್ಪತ್ರೆಯ ನಾಲ್ಕನೇ ಮಹಡಿಯ ಮೇಲೆ ಸೋಮವಾರ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು, ಐವರು ಪತ್ರಕರ್ತರು ಸೇರಿದಂತೆ ಕನಿಷ್ಠ 20 ಮಂದಿ ಸಾವನ್ನಪ್ಪಿದ್ದಾರೆ.

ನಾಸರ್ ಆಸ್ಪತ್ರೆಯ ನಾಲ್ಕನೇ ಮಹಡಿಯಲ್ಲಿದ್ದ 20 ಜನ ಡಬಲ್-ಟ್ಯಾಪ್ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ. ಮೊದಲು ಒಂದು ಕ್ಷಿಪಣಿ ಆಸ್ಪತ್ರೆಗೆ ಅಪ್ಪಳಿಸಿತು. ನಂತರ ರಕ್ಷಣಾ ಸಿಬ್ಬಂದಿ ಆಗಮಿಸುತ್ತಿದ್ದಂತೆ ಮತ್ತೊಂದು ಕ್ಷಿಪಣಿ ಅಪ್ಪಳಿಸಿದೆ ಎಂದು ಹೇಳಿದೆ.

ದಾಳಿಯಲ್ಲಿ ಸಾವನ್ನಪ್ಪಿದವರಲ್ಲಿ ತನ್ನ ಪತ್ರಕರ್ತ ಮೊಹಮ್ಮದ್ ಸಲಾಮ್ ಕೂಡ ಸೇರಿದ್ದಾರೆ ಎಂದು ಅಲ್ ಜಜೀರಾ ದೃಢಪಡಿಸಿದೆ. ತನ್ನ ಕ್ಯಾಮೆರಾಮನ್ ಹುಸ್ಸಾಮ್ ಅಲ್-ಮಸ್ರಿ ಕೂಡ ಮುಷ್ಕರದಲ್ಲಿ ಸಾವನ್ನಪ್ಪಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. ರಾಯಿಟರ್ಸ್ ಮತ್ತೊಬ್ಬ ಛಾಯಾಗ್ರಾಹಕ ಹಾತೆಮ್ ಖಲೀದ್ ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

Israeli Prime Minister Benjamin Netanyahu
ಗಾಜಾ ಆಸ್ಪತ್ರೆ ಮೇಲೆ ಇಸ್ರೇಲ್ ವೈಮಾನಿಕ ದಾಳಿ: ಐವರು ಪತ್ರಕರ್ತರು ಸೇರಿ 20 ಮಂದಿ ಸಾವು

ಅಕ್ಟೋಬರ್ 2023 ರಿಂದ, ಗಾಜಾ ಸಂಘರ್ಷದ ಬಗ್ಗೆ ವರದಿ ಮಾಡುವಾಗ 200 ಕ್ಕೂ ಹೆಚ್ಚು ಪತ್ರಕರ್ತರು ಸಾವನ್ನಪ್ಪಿದ್ದಾರೆ,

ಈ ನಡುವೆ ಆಸ್ಪತ್ರೆ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಗೆ ವಿಶ್ವದಾದ್ಯಂತ ವ್ಯಾಪಕ ಖಂಡನೆಗಳು ವ್ಯಕ್ತವಾಗುತ್ತಿವೆ.

ಪತ್ರಕರ್ತರ ಹತ್ಯೆಯನ್ನು ಖಂಡಿಸಿದ ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ (RSF) "ಎಲ್ಲರನ್ನೂ ಉದ್ದೇಶಪೂರ್ವಕವಾಗಿಯೇ ಗುರಿಯಾಗಿಸಲಾಗಿದೆ ಎಂದು ಸಿಕ್ಕಿರುವ ಸಾಕ್ಷಿಗಳು ತೋರಿಸುತ್ತಿದೆ ಎಂದು ಹೇಳಿದೆ.

ಪತ್ರಕರ್ತರ ಮೇಲಿನ ಈ ಹತ್ಯಾಕಾಂಡವನ್ನು ಅಂತ್ಯಗೊಳಿಸಲು ವಿಶ್ವಸಂಸ್ಥೆ ಭದ್ರತಾ ಮಂಡಳಿಯು ತುರ್ತು ಸಭೆ ಕರೆಯಬೇಕೆಂದು ಆಗ್ರಹಿಸಿದೆ.

ಈ ನಡುವೆ ಕತಾರ್ ಈ ದಾಳಿಯನ್ನು "ಸಹೋದರ ಪ್ಯಾಲೆಸ್ಟೀನಿಯನ್ ಜನರ ವಿರುದ್ಧ ಆಕ್ರಮಣವು ನಡೆಸುತ್ತಿರುವ ಘೋರ ಅಪರಾಧಗಳ ಹೊಸ ಸಂಚಿಕೆ ಮತ್ತು ಅಂತರರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆ ಎಂದು ಬಣ್ಣಿಸಿದೆ.

ಜರ್ಮನಿಯ ವಿದೇಶಾಂಗ ಸಚಿವಾಲಯ ದಾಳಿ ಸಂಬಂಧ ತನಿಖೆಗೆ ಒತ್ತಾಯಿಸಿದೆ, ಯುದ್ಧದ "ವಿನಾಶಕಾರಿ ವಾಸ್ತವವನ್ನು ಚಿತ್ರಿಸಲು ಪತ್ರಕರ್ತರ ಕೆಲಸ ಅನಿವಾರ್ಯ" ಎಂದು ಒತ್ತಿ ಹೇಳಿದೆ. ಡಾಕ್ಟರ್ಸ್ ವಿಥೌಟ್ ಬಾರ್ಡರ್ಸ್ (MSF) ದಾಳಿಗಳನ್ನು ಖಂಡಿಸಿದೆ.

ಕೆಲ ದಿನಗಳ ಹಿಂದಷ್ಟೇ ಹೇಳಿಕೆ ನೀಡಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಗಾಜಾ ಯುದ್ಧವು ಮೂರು ವಾರಗಳಲ್ಲಿ "ನಿರ್ಣಾಯಕ ಅಂತ್ಯ" ತಲುಪುತ್ತದೆ ಎಂದು ಹೇಳಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com