ಭಾರತ, ಪಾಕ್ ನಡುವಿನ ಉದ್ವಿಗ್ನತೆ ಕಡಿಮೆ ಮಾಡಲು ಅಮೆರಿಕ ಒತ್ತಾಯ; ಪಹಲ್ಗಾಮ್ ತನಿಖೆಗೆ ಷರೀಫ್ ಸಹಾಯ ಕೋರಿಕೆ

ಪಹಲ್ಗಾಮ್ ಭಯೋತ್ಪಾದಕ ದಾಳಿಯ ದುಷ್ಕರ್ಮಿಗಳು, ಬೆಂಬಲಿಗರು ಮತ್ತು ಯೋಜಕರನ್ನು ಕಟಕಟೆಗೆ ತರಬೇಕು ಎಂದು ಜೈಶಂಕರ್ ರುಬಿಯೊಗೆ ತಿಳಿಸಿದರು.
S Jaishankar
ಎಸ್ ಜೈಶಂಕರ್ online desk
Updated on

ನ್ಯೂಯಾರ್ಕ್: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಭಾರತ ಮತ್ತು ಪಾಕಿಸ್ತಾನಗಳು ತಮ್ಮ ಉದ್ವಿಗ್ನತೆಯನ್ನು ಕಡಿಮೆ ಮಾಡಿಕೊಳ್ಳುವಂತೆ ಅಮೆರಿಕ ಒತ್ತಾಯಿಸಿದೆ.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರೊಂದಿಗೆ ಪ್ರತ್ಯೇಕ ಫೋನ್ ಸಂಭಾಷಣೆ ನಡೆಸಿ ಮತ್ತಷ್ಟು ಉಲ್ಬಣಗೊಳ್ಳುವುದನ್ನು ತಪ್ಪಿಸುವ ಬಗ್ಗೆ ಒತ್ತಿ ಹೇಳಿದರು.

ಬುಧವಾರ ರಾತ್ರಿ ಜೈಶಂಕರ್ ಅವರೊಂದಿಗಿನ ತಮ್ಮ ಫೋನ್ ಸಂಭಾಷಣೆಯಲ್ಲಿ, ರುಬಿಯೊ "ಭಯಾನಕ" ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ ಜೀವಗಳಿಗೆ ತಮ್ಮ "ದುಃಖ" ವ್ಯಕ್ತಪಡಿಸಿದರು ಮತ್ತು ಭಯೋತ್ಪಾದನೆಯ ವಿರುದ್ಧ ಭಾರತದೊಂದಿಗೆ ಸಹಕರಿಸಲು ಅಮೆರಿಕದ ಬದ್ಧತೆಯನ್ನು ಪುನರುಚ್ಚರಿಸಿದರು ಎಂದು ಅಮೆರಿಕ ವಿದೇಶಾಂಗ ಇಲಾಖೆ ತಿಳಿಸಿದೆ.

26 ನಾಗರಿಕರನ್ನು ಕೊಂದ "ಆತ್ಮಸಾಕ್ಷಿಯಿಲ್ಲದ" ದಾಳಿಯ ತನಿಖೆಯಲ್ಲಿ ಇಸ್ಲಾಮಾಬಾದ್‌ನ ಸಹಕಾರಕ್ಕಾಗಿ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಷರೀಫ್ ಅವರಿಗೆ ಕರೆ ನೀಡಿದ್ದಾರೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ದುಷ್ಕರ್ಮಿಗಳು, ಬೆಂಬಲಿಗರು ಮತ್ತು ಯೋಜಕರನ್ನು ಕಟಕಟೆಗೆ ತರಬೇಕು ಎಂದು ಜೈಶಂಕರ್ ರುಬಿಯೊಗೆ ತಿಳಿಸಿದರು.

S Jaishankar
ಪಾಕಿಸ್ತಾನಕ್ಕೆ ನೂತನ ಭದ್ರತಾ ಸಲಹೆಗಾರ: ಲೆ. ಜನರಲ್ ಮುಹಮ್ಮದ್ ಅಸಿಮ್ ಮಲಿಕ್ ನೇಮಕ

"ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ನಿನ್ನೆ Rubio ಜೊತೆ ಚರ್ಚಿಸಲಾಗಿದೆ. ಅದರ ಅಪರಾಧಿಗಳು, ಬೆಂಬಲಿಗರು ಮತ್ತು ಯೋಜಕರನ್ನು ಕಟಕಟೆಗೆ ತರಬೇಕು" ಎಂದು ವಿದೇಶಾಂಗ ಸಚಿವರು ಗುರುವಾರ 'X' ನಲ್ಲಿ ಹೇಳಿದರು.

ಏಪ್ರಿಲ್ 22 ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತವು ಪ್ರತೀಕಾರ ತೀರಿಸಿಕೊಳ್ಳುವ ಸಾಧ್ಯತೆಯ ಬಗ್ಗೆ ಊಹಾಪೋಹಗಳ ನಡುವೆ ಜೈಶಂಕರ್-ರುಬಿಯೊ ಫೋನ್ ಸಂಭಾಷಣೆ ನಡೆದಿದೆ.

"ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಜೀವಗಳಿಗೆ ಕಾರ್ಯದರ್ಶಿ ತಮ್ಮ ದುಃಖವನ್ನು ವ್ಯಕ್ತಪಡಿಸಿದರು ಮತ್ತು ಭಯೋತ್ಪಾದನೆಯ ವಿರುದ್ಧ ಭಾರತದೊಂದಿಗೆ ಸಹಕಾರಕ್ಕೆ ಅಮೆರಿಕದ ಬದ್ಧತೆಯನ್ನು ಪುನರುಚ್ಚರಿಸಿದರು" ಎಂದು ಯುಎಸ್ ವಿದೇಶಾಂಗ ಇಲಾಖೆಯ ವಕ್ತಾರ ಟ್ಯಾಮಿ ಬ್ರೂಸ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com