ಪಾಕ್-ಭಾರತದ ನಡುವೆ ಕದನ ವಿರಾಮ: US ಗೆ ಧನ್ಯವಾದ ಹೇಳಬೇಕೆ?; ಪತ್ರಕರ್ತರ ಪ್ರಶ್ನೆಗೆ ಜೈಶಂಕರ್ ಪ್ರತಿಕ್ರಿಯೆ ಏನಿತ್ತು?

"ಕುರುಡರಲ್ಲದ ಯಾರಾದರೂ ಭಯೋತ್ಪಾದಕ ಸಂಘಟನೆಗಳು ಪಾಕಿಸ್ತಾನದ ನಗರಗಳು ಮತ್ತು ಪಟ್ಟಣಗಳಿಂದ ಬಹಿರಂಗವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ನೋಡಬಹುದು.
 S Jaishankar
ಎಸ್ ಜೈಶಂಕರ್online desk
Updated on

ನವದೆಹಲಿ: ಪಾಕಿಸ್ತಾನದಲ್ಲಿ ಭಯೋತ್ಪಾದನೆಯು "ಮುಕ್ತ ವ್ಯವಹಾರ"ವಾಗಿದ್ದು, ಇದನ್ನು ಸರ್ಕಾರ ಮತ್ತು ಅದರ ಸೇನೆ ಆರ್ಥಿಕವಾಗಿ ಪೋಷಿಸುತ್ತದೆ, ಸಂಘಟಿಸುತ್ತದೆ ಮತ್ತು ಬಳಸುತ್ತದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ಘರ್ಷಣೆಗಳ ಸಮಯದಲ್ಲಿ ಪರಮಾಣು ಸಂಘರ್ಷದಿಂದ "ತುಂಬಾ ಬಹಳ ದೂರದಲ್ಲಿದ್ದವು" ಎಂದು ವಿದೇಶಾಂಗ ಸಚಿವರು ಹೇಳಿದ್ದಾರೆ.

ಜರ್ಮನ್ ಪತ್ರಿಕೆ FAZ ಗೆ ನೀಡಿದ ಸಂದರ್ಶನದಲ್ಲಿ ಪಶ್ಚಿಮ ದೇಶಗಳನ್ನು ಸ್ಪಷ್ಟವಾಗಿ ಟೀಕಿಸಿರುವ, ಜೈಶಂಕರ್, "ನಮ್ಮ ಪ್ರಪಂಚದ ಭಾಗ"ದಲ್ಲಿರುವ ಎಲ್ಲವನ್ನೂ "ಪರಮಾಣು ಸಮಸ್ಯೆ" ಗೆ ಜೋಡಿಸುವ ಪ್ರವೃತ್ತಿ ಇದೆ ಎಂದು ಹೇಳಿದ್ದಾರೆ.

"ತುಂಬಾ, ತುಂಬಾ ದೂರ. ನಿಮ್ಮ ಪ್ರಶ್ನೆಯಿಂದ ನಾನು ನಿಜವಾಗಿಯೂ ಆಶ್ಚರ್ಯಚಕಿತನಾಗಿದ್ದೇನೆ" ಎಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಪರಮಾಣು ಸಂಘರ್ಷದಿಂದ ಜಗತ್ತು ಎಷ್ಟು ದೂರದಲ್ಲಿದೆ ಎಂದು ಕೇಳಿದಾಗ ಅವರು ಹೇಳಿದ್ದಾರೆ.

"ಯಾವುದೇ ಹಂತದಲ್ಲಿ ಪರಮಾಣು ಮಟ್ಟವನ್ನು ತಲುಪಿಲ್ಲ. ಪ್ರಪಂಚದ ನಮ್ಮ ಭಾಗದಲ್ಲಿ ನಡೆಯುವ ಎಲ್ಲವೂ ನೇರವಾಗಿ ಪರಮಾಣು ಸಮಸ್ಯೆಗೆ ಕಾರಣವಾಗುತ್ತದೆ ಎಂಬ ನಿರೂಪಣೆ ಇದೆ. ಅದು ನನ್ನನ್ನು ತುಂಬಾ ಗೊಂದಲಕ್ಕೀಡುಮಾಡುತ್ತದೆ ಈ ರೀತಿಯ ನಿರೂಪಣೆಗಳು ಭಯೋತ್ಪಾದನೆಯಂತಹ ಭಯಾನಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತದೆ" ಎಂದು ಅವರು ಹೇಳಿದ್ದಾರೆ.

ಭಯೋತ್ಪಾದಕ ಸಂಘಟನೆಗಳು ಪಾಕಿಸ್ತಾನದ ನಗರಗಳು ಮತ್ತು ಪಟ್ಟಣಗಳಿಂದ "ಬಹಿರಂಗವಾಗಿ" ಕಾರ್ಯನಿರ್ವಹಿಸುತ್ತಿವೆ ಎಂದು ಜೈಶಂಕರ್ ಇದೇ ವೇಳೆ ಆರೋಪಿಸಿದ್ದಾರೆ.

 S Jaishankar
Operation Sindoor ಆರಂಭಿಸಿದ ಅರ್ಧಗಂಟೆ ನಂತರ ಪಾಕಿಸ್ತಾನಕ್ಕೆ ಮಾಹಿತಿ: ವಿದೇಶಾಂಗ ಸಚಿವ ಜೈಶಂಕರ್

ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕರು ಮತ್ತು ಪಾಕಿಸ್ತಾನದ ನಡುವಿನ ಸಂಬಂಧದ ಬಗ್ಗೆ ಭಾರತ ತನ್ನ ಪಾಲುದಾರರಿಗೆ ಮನವರಿಕೆ ಮಾಡಿಕೊಡಲು ಸಾಧ್ಯವಾಗಿದೆಯೇ ಎಂದು ಕೇಳಿದಾಗ ಅವರ ಹೇಳಿಕೆಗಳು ಬಂದವು.

"ಕುರುಡರಲ್ಲದ ಯಾರಾದರೂ ಭಯೋತ್ಪಾದಕ ಸಂಘಟನೆಗಳು ಪಾಕಿಸ್ತಾನದ ನಗರಗಳು ಮತ್ತು ಪಟ್ಟಣಗಳಿಂದ ಬಹಿರಂಗವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ನೋಡಬಹುದು. ಅದು ರಹಸ್ಯವಲ್ಲ" ಎಂದು ವಿದೇಶಾಂಗ ಸಚಿವರು ಹೇಳಿದ್ದಾರೆ.

"ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಭಯೋತ್ಪಾದಕ ಪಟ್ಟಿಯು ಪಾಕಿಸ್ತಾನದ ಹೆಸರುಗಳು ಮತ್ತು ಸ್ಥಳಗಳಿಂದ ತುಂಬಿದೆ, ಮತ್ತು ಇವುಗಳನ್ನು ನಾವು ಗುರಿಯಾಗಿಸಿಕೊಂಡಿದ್ದೇವೆ. ಆದ್ದರಿಂದ ದಯವಿಟ್ಟು ಪರದೆಯ ಹಿಂದೆ ಏನೋ ನಡೆಯುತ್ತಿದೆ ಎಂದು ಭಾವಿಸಬೇಡಿ. "ಪಾಕಿಸ್ತಾನದಲ್ಲಿ, ಭಯೋತ್ಪಾದನೆಯು ಬಹಳ ಮುಕ್ತ ವ್ಯವಹಾರವಾಗಿದೆ. ರಾಜ್ಯವು ಬೆಂಬಲಿಸುವ, ಹಣಕಾಸು ಒದಗಿಸುವ, ಸಂಘಟಿಸುವ ಮತ್ತು ಬಳಸುವ ವ್ಯವಹಾರ. ಮತ್ತು ಅವರ ಮಿಲಿಟರಿಯಿಂದ," ಜೈಶಂಕರ್ ಹೇಳಿದ್ದಾರೆ.

ಭಾರತ -ಪಾಕ್ ನಡುವೆ ಕದನ ವಿರಾಮ ಘೋಷಣೆಯಾಗಿದ್ದಕ್ಕೆ ಅಮೆರಿಕಾಗೆ ಧನ್ಯವಾದ ಹೇಳಬೇಕೆ? ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಜೈಶಂಕರ್, "ನೇರ ಸಂಪರ್ಕ"ದ ಮೂಲಕ ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಕಮಾಂಡರ್‌ಗಳ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಜೈಶಂಕರ್ ಹೇಳಿದರು.

 S Jaishankar
ಭಾರತ-ಪಾಕ್ ಸಂಘರ್ಷ: ಕಾಶ್ಮೀರದಲ್ಲಿನ ಬಿಕ್ಕಟ್ಟಲ್ಲ, ಆದರೆ..- ಎಸ್ ಜೈಶಂಕರ್

ಭಾರತವು ಪಾಕಿಸ್ತಾನದ ಪ್ರಮುಖ ವಾಯುನೆಲೆಗಳು ಮತ್ತು ವಾಯು ರಕ್ಷಣಾ ವ್ಯವಸ್ಥೆಗಳನ್ನು ಪರಿಣಾಮಕಾರಿಯಾಗಿ ಹೊಡೆದು ನಿಷ್ಕ್ರಿಯಗೊಳಿಸಿತು, ಇದರಿಂದಾಗಿ ನೆರೆಯ ದೇಶವು ಯುದ್ಧವನ್ನು ಕೊನೆಗೊಳಿಸಲು ಪ್ರಯತ್ನಿಸಬೇಕಾಯಿತು ಎಂದು ಅವರು ಹೇಳಿದರು. "ಹಾಗಾದರೆ ಯುದ್ಧವನ್ನು ನಿಲ್ಲಿಸಿದ್ದಕ್ಕಾಗಿ ನಾನು ಯಾರಿಗೆ ಧನ್ಯವಾದ ಹೇಳಬೇಕು? ನಾನು ಭಾರತೀಯ ಸೇನೆಗೆ ಧನ್ಯವಾದ ಹೇಳುತ್ತೇನೆ ಏಕೆಂದರೆ ಪಾಕಿಸ್ತಾನವು: ನಾವು ನಿಲ್ಲಿಸಲು ಸಿದ್ಧರಿದ್ದೇವೆ" ಎಂದು ಹೇಳಲು ಕಾರಣ ಭಾರತೀಯ ಸೇನಾ ಕ್ರಮವಾಗಿತ್ತು" ಎಂದು ಅವರು ವಿವರಿಸಿದ್ದಾರೆ.

"ಯುರೋಪ್‌ನಲ್ಲಿ ನಿಮಗೆ, ಏಷ್ಯಾದಲ್ಲಿ ನನಗಿಗಿಂತ ಇತರ ಕಾಳಜಿಗಳು ಮತ್ತು ಚಿಂತೆಗಳು ಮುಖ್ಯ. ನೀವು ಸಂಘರ್ಷದ ಬಗ್ಗೆ ಯೋಚಿಸುವಾಗ, ನೀವು ಉಕ್ರೇನ್ ಬಗ್ಗೆ ಯೋಚಿಸುತ್ತೀರಿ" ಎಂದು ಪಶ್ಚಿಮದ ರಾಷ್ಟ್ರಗಳ ಪಕ್ಷಪಾತದ ದೃಷ್ಟಿಕೋನವನ್ನು ಜೈಶಂಕರ್ ಟೀಕಿಸಿದ್ದಾರೆ.

"ನಾನು ಸಂಘರ್ಷದ ಬಗ್ಗೆ ಯೋಚಿಸಿದಾಗ, ನಾನು ಪಾಕಿಸ್ತಾನ, ಭಯೋತ್ಪಾದನೆ, ಚೀನಾ ಮತ್ತು ನಮ್ಮ ಗಡಿಗಳ ಬಗ್ಗೆ ಯೋಚಿಸುತ್ತೇನೆ. ನಮ್ಮ ದೃಷ್ಟಿಕೋನಗಳು ಒಂದೇ ಆಗಿರಲು ಸಾಧ್ಯವಿಲ್ಲ" ಎಂದು ಅವರು ಇದೇ ವೇಳೆ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com