Pak ಸಚಿವನಿಗೆ ಮುಖಭಂಗ: ನೆತನ್ಯಾಹು ವಿರುದ್ಧ ಮಾತಾಡ್ತಿದ್ದಂತೆ ಶೋ ನಿಲ್ಲಿಸಿ ಆಸಿಫ್‌ನನ್ನು ಹೊರಕಹಿಸಿದ ಆ್ಯಂಕರ್, Video!

ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಸೆರೆಹಿಡಿದಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು 'ಅಪಹರಿಸುವಂತೆ' ಅಮೆರಿಕ ಮತ್ತು ಟರ್ಕಿಗೆ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಮನವಿ ಮಾಡಿದ್ದರು.
Khawaja Asif
ಖವಾಜಾ ಆಸಿಫ್
Updated on

ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಸೆರೆಹಿಡಿದಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು 'ಅಪಹರಿಸುವಂತೆ' ಅಮೆರಿಕ ಮತ್ತು ಟರ್ಕಿಗೆ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಮನವಿ ಮಾಡಿದ್ದರು. ಗಾಜಾದಲ್ಲಿ ನೆತನ್ಯಾಹು ಅವರ ಕ್ರಮಗಳ ಕುರಿತು ಖವಾಜಾ ಮಾತನಾಡುತ್ತಿದ್ದಂತೆ ಸಚಿವನ ಮಾತಿಗೆ ಅಡ್ಡಿಪಡಿಸಿದ ಆ್ಯಂಕರ್ ನಂತರ ಶೋನಿಂದಲೇ ಖವಾಜಾರನ್ನು ಹೊರಗೆ ಕಳುಹಿಸಿದ್ದಾರೆ.

ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ತಮ್ಮ ಹೇಳಿಕೆಯೊಂದಿಗೆ ಅಂತರರಾಷ್ಟ್ರೀಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿತ್ತು. ಟಿವಿ ಸಂದರ್ಶನವೊಂದರಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು "ಮಾನವೀಯತೆಯ ಅತಿದೊಡ್ಡ ಅಪರಾಧಿ" ಎಂದು ಕರೆದರು. ಅದೇ ಸಂಭಾಷಣೆಯ ಸಮಯದಲ್ಲಿ, ನೆತನ್ಯಾಹು ಅವರನ್ನು ಬೆಂಬಲಿಸುವ ದೇಶಗಳಿಗೂ ಶಿಕ್ಷೆಯಾಗಬೇಕು ಎಂದು ಅವರು ಹೇಳಿದರು. ಖವಾಜಾ ಸ್ಪಷ್ಟವಾಗಿ ಯುಎಸ್ ಮತ್ತು ಟ್ರಂಪ್ ಅವರನ್ನು ಉಲ್ಲೇಖಿಸುತ್ತಿದ್ದಂತೆ ಆ್ಯಂಕರ್ ಅವರ ಮಾತಿಗೆ ಅಡ್ಡಿಪಡಿಸಿದರು.

ಜಿಯೋ ನ್ಯೂಸ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, ಟಿವಿ ನಿರೂಪಕ ಹಮೀದ್ ಮಿರ್ ಅವರೊಂದಿಗೆ ಮಾತನಾಡಿದ ಖವಾಜಾ ಆಸಿಫ್, ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ (ಐಸಿಸಿ) ನೆತನ್ಯಾಹು ವಿರುದ್ಧ ಬಂಧನ ವಾರಂಟ್ ಹೊರಡಿಸಿರುವುದರಿಂದ, ಅಮೆರಿಕ ಇಸ್ರೇಲ್ ಪ್ರಧಾನಿಯನ್ನು ಅಪಹರಿಸುತ್ತದೆ ಎಂದು ತಾನು ಆಶಿಸುತ್ತೇನೆ ಎಂದು ಹೇಳಿದರು. ನೆತನ್ಯಾಹು ಅತ್ಯಂತ ಬೇಕಾಗಿರುವ ಅಪರಾಧಿ. ಅಮೆರಿಕ ಅವರನ್ನು ಅಪಹರಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು. ಅಮೆರಿಕ ನಿಜವಾಗಿಯೂ ಮಾನವೀಯತೆಯ ಸ್ನೇಹಿತನಾಗಿದ್ದರೆ, ಅದು ಹಾಗೆ ಮಾಡಬೇಕು" ಎಂದು ಅವರು ಹೇಳಿದರು.

ಟರ್ಕಿ ನೆತನ್ಯಾಹು ಅವರನ್ನು ಅಪಹರಿಸಿ ಅಂಕಾರಾಗೆ ಕರೆತರುವ ಸಾಧ್ಯತೆಯನ್ನು ಆಂಕರ್ ಎತ್ತಿದಾಗ, ಆಸಿಫ್, "ಟರ್ಕಿ ನೆತನ್ಯಾಹು ಅವರನ್ನು ಅಪಹರಿಸಬಹುದು ಮತ್ತು ನಾವು ಪಾಕಿಸ್ತಾನಿಗಳು ಅದಕ್ಕಾಗಿ ಪ್ರಾರ್ಥಿಸುತ್ತಿದ್ದೇವೆ" ಎಂದು ಹೇಳಿದರು. ಕಳೆದ ನಾಲ್ಕು ಅಥವಾ ಐದು ಸಾವಿರ ವರ್ಷಗಳಲ್ಲಿ, ಇಸ್ರೇಲ್ ಮಾಡಿದ್ದನ್ನು ಯಾವುದೇ ಸಮುದಾಯ ಪ್ಯಾಲೆಸ್ಟೀನಿಯನ್ನರಿಗೆ ಮಾಡಿಲ್ಲ. ಅವರು (ನೆತನ್ಯಾಹು) ಮಾನವೀಯತೆಯ ವಿರುದ್ಧದ ಅತಿದೊಡ್ಡ ಅಪರಾಧಿ. ಜಗತ್ತು ಎಂದಿಗೂ ದೊಡ್ಡ ಅಪರಾಧಿಯನ್ನು ನೋಡಿಲ್ಲ ಎಂದು ಹೇಳಿದ್ದರು.

Khawaja Asif
ಹೊಂದಿಕೊಳ್ಳಲು ಸಾಧ್ಯವಿಲ್ಲ ಎಂದು ಯಾರು ಹೇಳಿದ್ದು?': ಅಮೆರಿಕ ವ್ಯಾಪಾರ ಒಪ್ಪಂದದ ಅನಿಶ್ಚಿತತೆ ನಡುವೆಯೇ ಹೊಸ ಮಾರುಕಟ್ಟೆಗಳತ್ತ ಭಾರತ ಕಣ್ಣು!

ಆಗ ಮಧ್ಯಪ್ರವೇಶಿಸಿದ ಆ್ಯಂಕರ್, ಶೋ ಮಧ್ಯೆಯಲ್ಲಿ ಬ್ರೇಕ್ ತೆಗೆದುಕೊಂಡರು. ಅಲ್ಲದೆ ಖವಾಜಾ ಆಸಿಫ್ ವಿರಾಮದ ನಂತರ ಮತ್ತೆ ಪ್ರಸಾರಕ್ಕೆ ಬರುವುದಿಲ್ಲ ಎಂದು ಘೋಷಿಸಿದರು. ಈ ಹಾನಿ ನಿಯಂತ್ರಣವು ಇತ್ತೀಚಿನ ತಿಂಗಳುಗಳಲ್ಲಿ ಯುನೈಟೆಡ್ ಸ್ಟೇಟ್ಸ್‌ನೊಂದಿಗಿನ ತನ್ನ ಸಂಬಂಧವನ್ನು ಸರಿಪಡಿಸಲು ಪಾಕಿಸ್ತಾನದ ಪ್ರಯತ್ನಗಳ ಭಾಗವಾಗಿದೆ ಎಂದು ನಂಬಲಾಗಿದೆ. ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತದೊಂದಿಗಿನ ಸಂಘರ್ಷದ ನಂತರ, ಪಾಕಿಸ್ತಾನವು ಡೊನಾಲ್ಡ್ ಟ್ರಂಪ್ ಅವರನ್ನು ಹಲವಾರು ಬಾರಿ ಸಾರ್ವಜನಿಕವಾಗಿ ಹೊಗಳಿದೆ. ನೊಬೆಲ್ ಶಾಂತಿ ಪ್ರಶಸ್ತಿಗಾಗಿ ಅವರಿಗೆ ಬೆಂಬಲವನ್ನು ವ್ಯಕ್ತಪಡಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com