ಉಜ್ಬೇಕಿಸ್ತಾನ್‌: ಮತಾಂತರಕ್ಕೆ ಒಪ್ಪದ ಸಹ Hindu ವಿದ್ಯಾರ್ಥಿನಿಯನ್ನು ಬರ್ಬರವಾಗಿ ಕೊಂದ ಕೇರಳದ ಸದ್ರುಲ್

ಉಜ್ಬೇಕಿಸ್ತಾನ್‌ನಲ್ಲಿ ವೈದ್ಯಕೀಯ ಅಧ್ಯಯನ ಮಾಡುತ್ತಿದ್ದ 21 ವರ್ಷದ ಕೇರಳದ ವಿದ್ಯಾರ್ಥಿನಿಯನ್ನು ಆಕೆಯ ಸಹಪಾಠಿಯೇ ಕೊಲೆ ಮಾಡಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.
Sawariya Basanth, Sadarul Anam
ಸವಾರಿಯಾ ಬಸಂತ್, ಸದ್ರುಲ್ ಅನಮ್
Updated on

ಉಜ್ಬೇಕಿಸ್ತಾನ್‌ನಲ್ಲಿ ವೈದ್ಯಕೀಯ ಅಧ್ಯಯನ ಮಾಡುತ್ತಿದ್ದ 21 ವರ್ಷದ ಕೇರಳದ ವಿದ್ಯಾರ್ಥಿನಿಯನ್ನು ಆಕೆಯ ಸಹಪಾಠಿಯೇ ಕೊಲೆ ಮಾಡಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಯು ಮತಾಂತರಗೊಳ್ಳಲು ಒತ್ತಡ ಹೇರುತ್ತಿದ್ದ ಎಂದು ಮೃತಳ ಕುಟುಂಬ ಆರೋಪಿಸಿದೆ. ಘಟನೆಯ ನಂತರ, ಆರೋಪಿ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ.

ಮೃತಳನ್ನು ಕೇರಳದ ಅಲಪ್ಪುಳ ಜಿಲ್ಲೆಯ ಹರಿಪಾಡ್ ನಿವಾಸಿ 21 ವರ್ಷದ ಸವಾರಿಯಾ ಬಸಂತ್ ಎಂದು ಗುರುತಿಸಲಾಗಿದೆ. ಆಕೆ ಉಜ್ಬೇಕಿಸ್ತಾನ್‌ನ ಬುಖಾರಾ ರಾಜ್ಯ ವೈದ್ಯಕೀಯ ಸಂಸ್ಥೆಯಲ್ಲಿ ಪ್ರಥಮ ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದಳು. ಆರೋಪಿಯನ್ನು ಕೇರಳದ ಮಲಪ್ಪುರಂ ಜಿಲ್ಲೆಯ ಪುಲ್ಮಂಥೋಲ್‌ನ 22 ವರ್ಷದ ಸದ್ರುಲ್ ಅನಮ್ ಮತ್ತು ಸವಾರಿಯಾ ಸಹ ವಿದ್ಯಾರ್ಥಿಗಳಾಗಿದ್ದರು. ತೀವ್ರ ವಾದದ ನಂತರ, ಸಹಪಾಠಿ ಸವಾರಿಯಾಳನ್ನು ಲ್ಯಾಪ್‌ಟಾಪ್‌ನಿಂದ ತೀವ್ರವಾಗಿ ಹೊಡೆದಿದ್ದು ತೀವ್ರ ರಕ್ತಸ್ರಾವದಿಂದ ಆಕೆ ಮೃತಪಟ್ಟಿದ್ದಾಳೆ ಎಂದು ಆರೋಪಿಸಲಾಗಿದೆ.

ಸವಾರಿಯಾಳ ತಂದೆ ಬಸಂತ್ ಕುವೈತ್‌ನಲ್ಲಿ ಕೆಲಸ ಮಾಡುತ್ತಾರೆ. ಆರೋಪಿ ಸದ್ರುಲ್ ತನ್ನ ಮಗಳ ಮೇಲೆ ಮತಾಂತರಗೊಳ್ಳುವಂತೆ ಒತ್ತಡ ಹೇರುತ್ತಿದ್ದಾನೆ ಎಂದು ಆರೋಪಿಸಿ ಅವರು ಕೇರಳ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಮೃತರ ಸಂಬಂಧಿ ಜನೀಶ್, ಆರೋಪಿ ಸವಾರಿಯಾ ಅವರನ್ನು ಮತಾಂತರಗೊಳ್ಳುವಂತೆ ನಿರಂತರವಾಗಿ ಒತ್ತಡ ಹೇರುತ್ತಿದ್ದನು. ಆಕೆ ವಿರೋಧಿಸಿದಾಗ ಆಕೆಯ ಮೇಲೆ ಹಲವಾರು ಬಾರಿ ಹಲ್ಲೆ ನಡೆಸಲಾಯಿತು ಎಂದು ಹೇಳಿದ್ದಾರೆ. ಮತಾಂತರಕ್ಕೆ ವಿರೋಧಿಸಿದ್ದಕ್ಕಾಗಿ ಸವಾರಿಯಾ ಮೇಲೆ ಸದ್ರುಲ್ ಹಲವು ಬಾರಿ ಹಲ್ಲೆ ನಡೆಸಿದ್ದನು ಎಂದು ಸ್ನೇಹಿತರು ಮತ್ತು ಸಹಪಾಠಿಗಳು ಎಂದು ದೃಢಪಡಿಸಿದ್ದಾರೆ.

Sawariya Basanth, Sadarul Anam
ಪಾಕ್‌ನ ಭಾಗವಾಗಿ ಕಾಶ್ಮೀರ ನಕ್ಷೆ ಪ್ರದರ್ಶನ: ಢಾಕಾದಲ್ಲೇ ಬಾಂಗ್ಲಾ ಮಾಜಿ ರಾಜತಾಂತ್ರಿಕನ ಬೆವರಿಳಿಸಿದ ಭಾರತೀಯ ಅಧಿಕಾರಿ ಪೂಜಾ, Video!

ಘಟನೆಯ ನಂತರ ಸವಾರಿಯಾ ಅವರ ಶವವನ್ನು ಕೇರಳಕ್ಕೆ ತರಲಾಯಿತು. ಕುಟುಂಬ ಸದಸ್ಯರ ದೂರಿನ ನಂತರ, ಗುರುವಾರ ಎರಡನೇ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಇದು ದೈಹಿಕ ಹಲ್ಲೆಯ ಸ್ಪಷ್ಟ ಲಕ್ಷಣಗಳನ್ನು ಬಹಿರಂಗಪಡಿಸಿತು. ಗುರುವಾರ ವಿದ್ಯಾರ್ಥಿಯ ಅಂತ್ಯಕ್ರಿಯೆ ನಡೆಸಲಾಯಿತು. ತಂದೆಯ ದೂರಿನ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 103 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹರಿಪಾಡ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ವಿ. ವಿಷ್ಣು ತಿಳಿಸಿದ್ದಾರೆ.

ಕೇರಳ ಪೊಲೀಸರು ಪ್ರಸ್ತುತ ಉಜ್ಬೇಕಿಸ್ತಾನ್ ಏಜೆನ್ಸಿಗಳಿಂದ ಅಧಿಕೃತ ಮಾಹಿತಿಗಾಗಿ ಕಾಯುತ್ತಿದ್ದಾರೆ. ಉಜ್ಬೇಕಿಸ್ತಾನ್‌ನಲ್ಲಿ ದಾಖಲಾಗಿರುವ ಅಪರಾಧಕ್ಕಾಗಿ ಕೇರಳದಲ್ಲಿ ದಾಖಲಾಗಿರುವ ಪ್ರಕರಣದ ಕಾನೂನು ಸಿಂಧುತ್ವವನ್ನು ಪರಿಶೀಲಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಉಜ್ಬೇಕಿಸ್ತಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಶವವನ್ನು ಸ್ವದೇಶಕ್ಕೆ ತರುವುದು ಸೇರಿದಂತೆ ಕುಟುಂಬಕ್ಕೆ ಸಾಧ್ಯವಿರುವ ಎಲ್ಲಾ ಸಹಾಯವನ್ನು ಸಹ ಒದಗಿಸಿದೆ. ಭಾರತೀಯ ರಾಯಭಾರಿ ಕುಟುಂಬವನ್ನು ಭೇಟಿ ಮಾಡಿದ್ದಾರೆ ಮತ್ತು ಸಂಬಂಧಿತ ಉಜ್ಬೇಕ್ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com