ರಕ್ತಕ್ಕೆ ಪ್ರತೀಕಾರ ತೀರಿಸಿಕೊಳ್ಳುತ್ತೇವೆ: ಇರಾನ್ ಸರ್ವೋಚ್ಛ ನಾಯಕ ಮೊಜ್ತಾಬಾ ಖಮೇನಿ ಶಪಥ!

ಇರಾನ್‌ನ ಸೇಡು "ಅನಿವಾರ್ಯವಾಗಿ ನಡೆಯಲೇಬೇಕು. ಈ ವಿಷಯವು ಅವರ ವೈಯಕ್ತಿಕ ಅಸ್ತಿತ್ವ ಅಥವಾ ಇತರ ಅಧಿಕಾರಿಗಳ ಅಸ್ತಿತ್ವವನ್ನು ಅವಲಂಬಿಸಿಲ್ಲ. ನಾವು ಇದ್ದರೂ ಇಲ್ಲದಿದ್ದರೂ ಅದು ನಿಜವಾಗುತ್ತದೆ ಎಂದು ಖಮೇನಿ ಬರೆದುಕೊಂಡಿದ್ದಾರೆ.
 Mojtaba Khamenei
ಮೊಜ್ತಾಬಾ ಖಮೇನಿ
Updated on

ಟೆಹರಾನ್: ಆಯತೊಲ್ಲಾ ಅಲಿ ಖಮೇನಿ ಸೇರಿದಂತೆ ಅಮೆರಿಕ-ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಫೆಬ್ರವರಿ 28 ರಂದು ಹತರಾದ ಎಲ್ಲಾ ಹುತಾತ್ಮರ ರಕ್ತಕ್ಕೆ ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದು ಇರಾನ್ ಸರ್ವೋಚ್ಛ ನಾಯಕ ಮೊಜ್ತಾಬಾ ಖಮೇನಿ ಪ್ರತಿಜ್ಞೆ ಮಾಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಂದೇಶವೊಂದನ್ನು ಅವರು ಹಂಚಿಕೊಂಡಿದ್ದು, ತಂದೆಯ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವುದು ಇಡೀ ರಾಷ್ಟ್ರದ ಬೇಡಿಕೆಯಾಗಿದೆ. ಅದು ಖಂಡಿತವಾಗಿಯೂ ನಡೆದೇ ತೀರುತ್ತದೆ ಎಂದು ಹೇಳಿದ್ದಾರೆ.

ಇರಾನ್‌ನ ಸೇಡು "ಅನಿವಾರ್ಯವಾಗಿ ನಡೆಯಲೇಬೇಕು. ಈ ವಿಷಯವು ಅವರ ವೈಯಕ್ತಿಕ ಅಸ್ತಿತ್ವ ಅಥವಾ ಇತರ ಅಧಿಕಾರಿಗಳ ಅಸ್ತಿತ್ವವನ್ನು ಅವಲಂಬಿಸಿಲ್ಲ. ನಾವು ಇದ್ದರೂ ಇಲ್ಲದಿದ್ದರೂ ಅದು ನಿಜವಾಗುತ್ತದೆ ಎಂದು ಖಮೇನಿ ಬರೆದುಕೊಂಡಿದ್ದಾರೆ.

ಶಿಯಾ ಮುಸ್ಲಿಮರ ಅತ್ಯಂತ ಪವಿತ್ರ ಸ್ಥಳಗಳಲ್ಲಿ ಒಂದಾಗಿರುವ ಈಶಾನ್ಯ ಇರಾನ್ ನ ಮಶಾದ್ ಪಟ್ಟಣದಲ್ಲಿ ಭಾರಿ ಜನಸ್ತೋಮದ ನಡುವೆ ಅಂತಿಮ ಯಾತ್ರೆ ನಂತರ ಶಿಯಾ ಮುಸ್ಲಿಂ ನಾಯಕ ಇಮಾಮ್ ರೆಜಾ ಅವರ ಸಮಾಧಿ ಸ್ಥಳದಲ್ಲೇಆಯತೊಲ್ಲಾ ಅಲಿ ಖಮೇನಿ ಅವರನ್ನು ಸಮಾಧಿ ಮಾಡಲಾಯಿತು ಎಂದು ಮೂಲಗಲು ಹೇಳಿವೆ.

 Mojtaba Khamenei
ಅಲಿ ಖಮೇನಿ ಅಂತ್ಯಕ್ರಿಯೆಯಲ್ಲಿ ಮೂವರು ಪುತ್ರರು ಭಾಗಿ: ಆದರೆ ಸರ್ವೋಚ್ಛ ನಾಯಕ ಮೊಜ್ತಾಬಾ ಗೈರು, ಹಲವು ಅನುಮಾನ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com