ಅಮೆರಿಕದ ವಾಷಿಂಗ್ಟನ್ ನಲ್ಲಿ ಮಾತನಾಡಿದ ಎಫ್ ಐಸಿಸಿಐ ಅಧ್ಯಕ್ಷ ಪಂಕಜ್ ಪಟೇಲ್ ಅವರು, ಆರ್ ಬಿಐ ನ ಇತ್ತೀಚೆಗಿನ ನಿರ್ಧಾರಗಳು ಅಚ್ಚರಿ ಮೂಡಿಸುತ್ತಿದೆ. ಆರ್ ಬಿಐ ದೇಶದ ಆರ್ಥಿಕತೆಗೆ ಪೂರಕವೋ ಅಥವಾ ಮಾರಕವೋ ತಿಳಿಯುತ್ತಿಲ್ಲ. ದೇಶದಲ್ಲಿ ಬಡ್ಡಿದರ ಶೇ.6ರಷ್ಟಿದ್ದು, ಆರ್ಥಿಕ ಬೆಳವಣಿಗೆ, ಹಣದುಬ್ಬರ ಮತ್ತು ಬಡ್ಡಿದರಗಳ ನಡುವೆ ಸಮತೋಲನ ಇರಬೇಕು. ಆಗಷ್ಟೇ ದೇಶದ ಆರ್ಥಿಕತೆ ಚೇತರಿಸಿಕೊಳ್ಳಲು ಸಾಧ್ಯ. ಆದರೆ ಆರ್ ಬಿಐ ನ ಇತ್ತೀಚೆಗಿನ ಆರ್ಥಿಕ ನೀತಿಗಳು ಉದ್ಯಮ ಸ್ನೇಹಿಯಾಗಿಲ್ಲ. ಇದು ದೇಶದ ಆರ್ಥಿಕತೆಗೆ ಖಂಡಿತಾ ಮಾರಕ ಎಂದು ಅಭಿಪ್ರಾಯಪಟ್ಟಿದ್ದಾರೆ.